Advertisement

ನಾಪತ್ತೆ ಆಗಿದ್ದ ಸೋಂಕಿತ ಬೆಂಗಳೂರಲ್ಲಿ ಪತ್ತೆ

06:25 AM May 16, 2020 | Lakshmi GovindaRaj |

ಕೋಲಾರ: ಮಂಡ್ಯ ಮೂಲದ ವ್ಯಕ್ತಿಯಿಂದ ಜಿಲ್ಲಾ ಕೇಂದ್ರ ಕೋಲಾರಕ್ಕೂ ಕೋವಿಡ್‌ 19 ಸೋಂಕು ಕಾಲಿಟ್ಟಿದ್ದು, ನಾಪತ್ತೆ ಆಗಿದ್ದ ಸೋಂಕಿತ ವ್ಯಕ್ತಿ ಬೆಂಗಳೂರಿನ ಬನಶಂಕರಿಯಲ್ಲಿ ಪತ್ತೆ ಆಗಿದ್ದಾನೆ.

Advertisement

ನಗರದ ಗಾಂಧಿನಗರದಲ್ಲಿ ಎರಡು  ವರ್ಷಗಳಿಂದಲೂ ಬಾಡಿಗೆಗೆ ಮನೆಯೊಂದರಲ್ಲಿ ವಾಸವಾಗಿದ್ದ ಸೋಂಕಿತವ್ಯಕ್ತಿ, ಲಾಕ್‌ಡೌನ್‌ಗಿಂತಲೂ ಮುಂಚಿತ ವಾಗಿಯೇ ಅಪಘಾತದಲ್ಲಿ ಕಾಲು ಗಾಯಗೊಂಡು ಮಂಡ್ಯಕ್ಕೆ ತೆರಳಿದ್ದ ಎನ್ನಲಾಗಿದೆ. ಮೇ 11 ರಂದು  ಕೋಲಾರದ ಮನೆಗೆ ವಾಪಸ್ಸಾಗಿದ್ದ ಆತನನ್ನು ಕ್ವಾರಂಟೈನ್‌ ನಲ್ಲಿಟ್ಟು, ಅವರ ಗಂಟಲ ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಶುಕ್ರವಾರ ಪ್ರಯೋಗಾಲಯದ ವರದಿಯಲ್ಲಿ ಪಾಸಿಟಿವ್‌ ಎಂದು ಬಂದಿದೆ.

ಮೊಬೈಲ್‌ ನಂಬರ್‌ ಟ್ರ್ಯಾಕ್‌: ಈ ಹಿನ್ನೆಲೆಯಲ್ಲಿ ಪಾಸಿಟಿವ್‌ ವ್ಯಕ್ತಿಯ ಮನೆಯ ಸುತ್ತಮುತ್ತಲೂ ಕಟ್ಟೆಚ್ಚರವಹಿಸಲು ಆಗಮಿಸಿದ ಆರೋಗ್ಯ ಹಾಗೂ ಪೊಲೀಸ್‌ ಸಿಬ್ಬಂದಿಗೆ ಆಚ್ಚರಿ ಕಾದಿತ್ತು. ಸೋಂಕಿತ ವ್ಯಕ್ತಿ ಮನೆಯಲ್ಲಿರದೆ  ನಾಪತ್ತೆಯಾಗಿದ್ದು, ತೀವ್ರ ಹುಡುಕಾಟ ನಡೆಸಿದ್ದು, ಪತ್ತೆ ಆಗಲಿಲ್ಲ. ನಂತರ ಆತ ಬೆಂಗಳೂರಿಗೆ ತೆರಳಿರುವ ಮಾಹಿತಿ ತಿಳಿದಿದೆ. ನಂತರ ಕಾರ್ಯಪ್ರವೃತ್ತರಾದ ಪೊಲೀಸರು ಆತನ ಮೊಬೈಲ್‌ ನಂಬರ್‌ ಟ್ರ್ಯಾಕ್‌ ಮಾಡಿ ಬೆಂಗಳೂರಿನ  ಬನಶಂಕರಿಯಲ್ಲಿ ಹಿಡಿದು ಸ್ಥಳೀಯ ಕೊವಿಡ್‌-19 ಆಸ್ಪತ್ರೆಗೆ ಸೇರಿಸಿದ್ದಾರೆ.

ಮನೆ ಸುತ್ತ ಕಟ್ಟೆಚ್ಚರ: ಸಂಜೆ ವೇಳೆಗೆ ಗಾಂಧಿನಗರದಲ್ಲಿ ಅವರು ವಾಸವಾಗಿದ್ದ ಮನೆಯ ಸುತ್ತಮುತ್ತ ಹಾಗೂ ರಸ್ತೆಯಲ್ಲಿ ವಾಹನಗಳ ಓಡಾಟ ಮತ್ತು ಜನರ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸೋಂಕು ನಿವಾರಕ ಔಷಧಿ ಸಿಂಪಡಣೆ  ಮಾಡಿ ಕಟ್ಟೆಚ್ಚರ ವಹಿಸಲಾಗಿದೆ.

ಮತ್ತೂಂದು ಪ್ರಕರಣ: ಮುಳಬಾಗಿಲು ತಾಲೂಕಿನಲ್ಲಿ ಐದು ಪಾಸಿಟಿವ್‌ ಪ್ರಕರಣಗಳು ಪತ್ತೆಯಾದ ನಂತರ ಕೆಜಿಎಫ್ ತಾಲೂಕಿನ ರಾಬರ್ಟ್‌ಸನ್‌ಪೇಟೆ ಹೋಬಳಿ ಬೈನೇನಪಲ್ಲಿ ಗ್ರಾಮದಲ್ಲಿ ಪಾಸಿಟಿವ್‌ ಪ್ರಕರಣವೊಂದು ಯುವಕನಲ್ಲಿ  ಪತ್ತೆಯಾಗಿದೆ.

Advertisement

992 ಸಂಖ್ಯೆಯ ಈತನು ಚನ್ನೈಗೆ ತೆರಳಿದ್ದ ಇತಿಹಾಸ ಹೊಂದಿದ್ದು, ಈ ಸಂದರ್ಭದಲ್ಲಿ ಪಾಸಿಟಿವ್‌ ಸೋಂಕು ತಗುಲಿರಬಹುದೆಂದು ಶಂಕಿಸಲಾಗಿದೆ. ಈತನನ್ನು ಅಧಿಕೃತ ಕೊವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.  ಸದ್ಯಕ್ಕೆ ಬೈನೇಪಲ್ಲಿಯಲ್ಲಿ ಈತನ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಲಾಗಿದೆ. ಇದರಿಂದ ಜಿಲ್ಲೆಯ ಪಾಸಿಟಿವ್‌ ಪ್ರಕರಣಗಳು ಅಧಿಕೃತವಾಗಿ 7ಕ್ಕೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next