Advertisement

Missing Case: ಸಾಲಗಾರರ ಹಾವಳಿಗೆ ಇಡೀ ಕುಟುಂಬ ನಾಪತ್ತೆ

03:09 PM Jan 29, 2024 | Team Udayavani |

ಮೈಸೂರು: ಸಾಲಗಾರರ ಕಾಟಕ್ಕೆ ಬೇಸತ್ತು ಇಡೀ ಕುಟುಂಬ ನಾಪತ್ತೆಯಾಗಿರುವ ಘಟನೆ ಮೈಸೂರಿನ ಕೆ.ಜಿ.ಕೊಪ್ಪಲು ಬಡಾವಣೆಯಲ್ಲಿ ನಡೆದಿದೆ.

Advertisement

ಕೆ.ಜಿ.ಕೊಪ್ಪಲಿನ ಮಹೇಶ್‌(35), ಈತನ ಪತ್ನಿ ಭವಾನಿ(28), ಪುತ್ರಿ ಪ್ರೇಕ್ಷಾ(3) ಇವರ ತಂದೆ ಮಹದೇವಪ್ಪ(65) ಹಾಗೂ ತಾಯಿ ಸುಮಿತ್ರ(55) ನಾಪತ್ತೆಯಾದವರು. ಈ ಸಂಬಂಧ ಭವಾನಿ ಸಹೋದರ ಜಗದೀಶ್‌ ಸರಸ್ವತಿಪುರಂ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸ್ನೇಹಿತರೊಬ್ಬರ ಮೊಬೈಲ್‌ಗೆ ವಾಯ್ಸ್ ಮೆಸೇಜ್‌ ಕಳುಹಿಸಿ ನಾಪತ್ತೆಯಾಗಿರುವ ಕುಟುಂಬ 8 ದಿನ ಕಳೆದರೂ ಸುಳಿವಿಲ್ಲ. ಮಾರ್ಕೆಟಿಂಗ್‌ ಬಿಸಿನೆಸ್‌ ನಡೆಸುತ್ತಿದ್ದ ಮಹೇಶ್‌, ವೀರೇಶ್‌ ಎಂಬುವರ ವ್ಯವಹಾರಕ್ಕೆ ಸಾಥ್‌ ನೀಡಿದ್ದಾರೆ.

ಮಹೇಶ್‌ ಪರಿಚಯ ಹೇಳಿಕೊಂಡು ವೀರೇಶ್‌ 30 ರಿಂದ 35 ಲಕ್ಷ ಸಾಲ ಪಡೆದಿದ್ದಾರೆ.. ವ್ಯವಹಾರದಲ್ಲಿ ನಷ್ಟವಾದ ಕಾರಣ ವೀರೇಶ್‌ ರಾತ್ರೋ ರಾತ್ರಿ ಎಸ್ಕೇಪ್‌ ಆಗಿದ್ದಾರೆ. ವೀರೇಶ್‌ಗೆ ಸಾಲ ನೀಡಿದ ಮಂದಿ ಮಹೇಶ್‌ ಮೇಲೆ ಒತ್ತಡ ಹೇರಿದ್ದಾರೆ. ಪ್ರಾರಂಭದಲ್ಲಿ 2 ಲಕ್ಷಕ್ಕೆ ಗ್ಯಾರಂಟಿ ಕೊಟ್ಟ ಮಹೇಶ್‌ ನಂತರ ಸಾಲದ ಸುಳಿಗೆ ಸಿಲುಕಿದ್ದಾರೆ.

ಸಾಲಗಾರರ ನಿರಂತರ ಒತ್ತಡಕ್ಕೆ ಹೆದರಿದ ಮಹೇಶ್‌ ತಮ್ಮ ಸ್ನೇಹಿತರಾದ ದರ್ಶನ್‌ ಎಂಬುವರ ಮೊಬೈಲ್‌ಗೆ ವಾಯ್ಸ್ ಮೆಸೇಜ್‌ ಮಾಡಿದ್ದಾರೆ. ಮಧ್ಯಸ್ಥಿಕೆ ವಹಿಸಿ ಸಾಲ ಕೊಡಿಸಿದ್ದೆ, ಸಾಲಗಾರರು ನನಗೆ ತೊಂದರೆ ಕೊಡುತ್ತಿದ್ದಾರೆ. ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ಸಾಲಗಾರರು ರಾಕ್ಷಸರಂತೆ ವರ್ತಿಸುತ್ತಿದ್ದಾರೆ. ನಾವು ಕೆರೆ ಅಥವಾ ಬಾವಿಗೆ ಬೀಳುತ್ತೇವೆ. ಒಂದು ವೇಳೆ ಮೃತದೇಹ ದೊರೆತರೆ ಅಂತ್ಯಕ್ರಿಯೆ ಮಾಡಿ. ಅವರನ್ನಂತೂ ಬಿಡಬೇಡಿ ಎಂದು ರಂಜಿತಾ, ದಿನೇಶ್‌, ಚಂದ್ರು ಹಾಗೂ ನೇತ್ರ ಎಂಬುವರ ಹೆಸರನ್ನ ವಾಯ್ಸ್ ಮೆಸೇಜ್‌ ನಲ್ಲಿ ಉಲ್ಲೇಖೀಸಿದ್ದಾರೆ. ಜನವರಿ 20ರಂದು ಕಾಣೆಯಾದ ಇವರು ಇದುವರೆಗೂ ಪತ್ತೆಯಾಗಿಲ್ಲ. ಸರಸ್ವತಿಪುರಂ ಠಾಣೆ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ದಾಖಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next