Advertisement

ದೈವಾರಾಧನೆ ನಿಂದನೆ, ಮಹಿಳೆಯರ ಕುರಿತು ವಿಕೃತ ಪೋಸ್ಟ್; ಆರೋಪಿ ಬಂಧನ

08:27 PM Jul 08, 2023 | Team Udayavani |

ಮಂಗಳೂರು: ನಕಲಿ ಟ್ವಿಟರ್ ಖಾತೆ ಸೃಷ್ಟಿಸಿ ತುಳುನಾಡಿನ ದೈವಾರಾಧನೆ ನಿಂದಿಸಿ ಮತ್ತು ಮಹಿಳೆಯರ ಕುರಿತು ಅಶ್ಲೀಲ ಪೋಸ್ಟ್ ಮಾಡಿರುವ ಆರೋಪಿಯನ್ನು ಸೆನ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

Advertisement

ಬಂಧಿತ ಆರೋಪಿ ಬೆಂಗಳೂರಿನ ಅಮೃತಹಳ್ಳಿಯ ಜಕ್ಕೂರು ಮುಖ್ಯ ರಸ್ತೆಯ ನಿವಾಸಿ ಶಿವರಾಜ್ ಹೆಚ್.ಕೆ(37)ಎನ್ನುವವನಾಗಿದ್ದಾನೆ. ಈತನ ವಿರುದ್ಧ ದೈವಾರಾಧನೆ ಸಂರಕ್ಷಣಾ ವೇದಿಕೆ (ರಿ) ದೂರು ದಾಖಲಿಸಿತ್ತು.

ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಜೈನ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಎಸಿಬಿ ಪಿ.ಎ.ಹೆಗ್ಡೆ ಅವರ ನೇತೃತ್ವದಲ್ಲಿ ಸೆನ್ ಕ್ರೈಂ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸತೀಶ್ ಎಂ.ಪಿ ಮತ್ತು ಸಿಬಂದಿ ಕಾರ್ಯಾಚರಣೆ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next