Advertisement

ಇನ್ನೇನು ಸುಡಲು ಸಿದ್ಧವಾಗಿದ್ದಾಗ, ಅಜ್ಜಿ ಎಚ್ಚರಾಗಿ ಅತ್ತಳು!

03:26 AM May 16, 2021 | Team Udayavani |

ಬಾರಾಮತಿ (ಮಹಾರಾಷ್ಟ್ರ): ಈ ಘಟನೆಯನ್ನು ನೀವು ಅತಿಮಾನುಷವೆಂದು ಭಾವಿಸುವ ಅಗತ್ಯವಿಲ್ಲ. ಆದರೆ ಅಂತಹದ್ದೇ ಒಂದು ಘಟನೆ ಇತ್ತೀಚೆಗೆ ಮಹಾರಾಷ್ಟ್ರದ ಬಾರಾಮತಿಯ ಮುಧಾಳೆ ಎಂಬ ಹಳ್ಳಿಯಲ್ಲಿ ನಡೆದಿದೆ.

Advertisement

ಕೊರೊನಾ ಖಚಿತವಾಗಿದ್ದರಿಂದ ಮೇ 10ರಂದು ಶಕುಂತಲಾ ಗಾಯಕ್ವಾಡ್‌ ಎಂಬ 76 ವರ್ಷದ ಅಜ್ಜಿಯನ್ನು ಆಸ್ಪತ್ರೆಗೆ ಒಯ್ಯಲಾಗಿದೆ. ಅಲ್ಲಿ ಹಾಸಿಗೆ ಸಿಕ್ಕಿಲ್ಲ, ಆ ವೇಳೆ ಅಜ್ಜಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಎಲ್ಲವನ್ನು ಪರಿಶೀಲಿಸಿ ಅಜ್ಜಿ ಸತ್ತಿದ್ದಾರೆ ಎಂದು ತೀರ್ಮಾನಿಸಿದ ಕುಟುಂಬಸ್ಥರು, ಆಕೆಯನ್ನು ಹಳ್ಳಿಗೆ ತಂದು ಚಟ್ಟದ ಮೇಲೆ ಮಲಗಿಸಿದ್ದಾರೆ. ಅನಂತರ ಸುಡಲು ಮುಂದಾದಾಗ ಇದ್ದಕ್ಕಿದ್ದಂತೆ ಕಣ್ಣುತೆರೆದ ಅಜ್ಜಿ, ಗೊಳ್ಳೋ ಎಂದು ಅಳಲಾರಂಭಿಸಿದ್ದಾರೆ.

ದಂಗಾದ ಕುಟುಂಬಸ್ಥರು ಕೂಡಲೇ ಅಜ್ಜಿಯನ್ನು ಆಸ್ಪತ್ರೆಗೆ ಒಯ್ದಿದ್ದಾರೆ. ಪ್ರಸ್ತುತ ಅವರಿಗೆ ಬಾರಾಮತಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ!

Advertisement

Udayavani is now on Telegram. Click here to join our channel and stay updated with the latest news.

Next