Advertisement

Pakistan ದಲ್ಲಿ ಅಲ್ಪಸಂಖ್ಯಾಕರು ಸುರಕ್ಷಿತರಲ್ಲ!: ಪಾಕ್‌ ಸಂಸತ್‌ನಲ್ಲಿ ರಕ್ಷಣ ಸಚಿವ ಹೇಳಿಕೆ

01:34 AM Jun 25, 2024 | Team Udayavani |

ಇಸ್ಲಾಮಾಬಾದ್‌: ಧರ್ಮದ ಹೆಸರಿನಲ್ಲಿ ಪಾಕಿಸ್ಥಾನದ ಅಲ್ಪಸಂಖ್ಯಾಕರು ಹಿಂಸೆಗೆ ಒಳಗಾಗಿದ್ದಾರೆ. ಅವರನ್ನು ರಕ್ಷಿಸುವಲ್ಲಿ ಸರಕಾರ ವಿಫ‌ಲವಾಗಿದೆ ಎಂದು ಪಾಕಿಸ್ಥಾನದ ರಕ್ಷಣ ಸಚಿವ ಖ್ವಾಜಾ ಆಸಿಫ್ ಕಳವಳ ವ್ಯಕ್ತಪಡಿಸಿದ್ದಾರೆ. ಪಾಕಿಸ್ಥಾನದ ಸಂಸತ್‌ನಲ್ಲಿ ಮಾತನಾಡಿದ ಅವರು, ದಿನೇದಿನೆ ಅಲ್ಪಸಂಖ್ಯಾಕರನ್ನು ಹತ್ಯೆ ಮಾಡಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

Advertisement

ಮುಸ್ಲಿಂ ಸಮುದಾಯದ ಸಣ್ಣ ಪಂಗಡಗಳೂ ಸೇರಿದಂತೆ ಪಾಕಿಸ್ಥಾನದಲ್ಲಿ ಯಾವುದೇ ಅಲ್ಪಸಂಖ್ಯಾಕರು ಸುರಕ್ಷಿತವಾಗಿಲ್ಲ. ಇದು ದೇಶಕ್ಕೆ ಮಜು ಗರದ ವಿಚಾರ ವಾಗಿದೆ. ಸಂತ್ರಸ್ತರು ಧರ್ಮನಿಂದನೆ ಮಾಡದಿದ್ದರೂ, ಅವರ ಮೇಲೆ ಅಂಥ ಆರೋಪ ಹೊರಿಸಿ  ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಕೊಲ್ಲಲಾ ಗುತ್ತದೆ ಎಂದು ವಿಷಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿರು ವ ಅಲ್ಪ ಸಂಖ್ಯಾತರ ರಕ್ಷಣೆಗೆ ಮಸೂದೆ ರೂಪಿ ಸಬೇಕಿದೆ ಎಂದಿದ್ದಾರೆ.

ಆದರೆ ಸಚಿವರ ಪ್ರಸ್ತಾವಕ್ಕೆ  ಪಾಕಿಸ್ಥಾನ್‌ ತೆಹ್ರೀಕ್‌- ಇ- ಇನ್ಸಾಫ್ ಪಕ್ಷ ವಿರೋಧಿಸಿದ ಕಾರಣ ಯಾವುದೇ ಮಸೂದೆ ರೂಪಿಸುವ ಕುರಿತು ಚರ್ಚೆ ನಡೆಸಲು ಸಾಧ್ಯವಾಗಲಿಲ್ಲ.  ಪಾಕಿಸ್ಥಾನದಲ್ಲಿ ಇಸ್ಲಾಂನ ಅಹ್ಮದಿ ಪಂಗಡ, ಹಿಂದೂ, ಸಿಕ್ಖ್, ಕ್ರಿಶ್ಚಿಯನ್ನರು ಅಲ್ಪಸಂಖ್ಯಾಕರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next