Advertisement

ಸಚಿವರ ಬದಲಾವಣೆ ನಿರ್ಧಾರವಿಲ್ಲ: ಪರಂ

02:06 AM May 28, 2019 | Sriram |
ಬೆಂಗಳೂರು: ರಾಜಕೀಯ ಬೆಳವಣಿಗೆಗೆ ಅನುಗುಣವಾಗಿ ಕೆಲ ಬದಲಾವಣೆಗಳು ಅಗತ್ಯವಿದ್ದು, ಈವರೆಗೆ ಸಚಿವರ ಬದಲಾವಣೆ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.
ಸೋಮವಾರ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಯಾರೂ ಅಸಮಾಧಾನಿತ ಶಾಸಕರಿಲ್ಲ. ಕ್ಷೇತ್ರಗಳಲ್ಲಿ ಕೆಲಸವಾಗಿಲ್ಲ ಎಂಬುದಕ್ಕೆ ಕೆಲ ಶಾಸಕರು ಬೇಸರಗೊಂಡಿದ್ದಾರೆ. ಅದನ್ನು ಶೀಘ್ರ ಸರಿಪಡಿಸಲಾಗುವುದು ಎಂದರು. ಶಾಸಕ ಸುಧಾಕರ್‌ ಅವರ ಮಾತನ್ನು ನಾವು ನಂಬುತ್ತೇವೆ. ಜತೆಗೆ ರಮೇಶ್‌ ಜಾರಕಿಹೊಳಿ ತಮ್ಮ ತಂಡದೊಂದಿಗೆ ಪಕ್ಷ ಬಿಡುತ್ತಾರೆ ಎಂಬುದು ಸತ್ಯಕ್ಕೆ ದೂರವಾಗಿದ್ದು, ಮೈತ್ರಿ ಸರ್ಕಾರ ಗಟ್ಟಿಗೊಳಿಸಲು ನೆರವಾಗುತ್ತಾರೆ ಎಂಬ ನಂಬಿಕೆಯಿದೆ ಎಂದು ತಿಳಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next