Advertisement

ತಾತ್ಕಾಲಿಕ ಸೂರಿಗಾಗಿ ಸಚಿವರ ಕಾಲಿಗೆರಗಿದ ವೃದ್ಧೆ

11:06 PM Sep 08, 2019 | Team Udayavani |

ಗದಗ: ತಾತ್ಕಾಲಿಕ ಸೂರು ಕಲ್ಪಿಸುವಂತೆ ಒತ್ತಾಯಿಸಿ ವೃದ್ಧೆಯೊಬ್ಬರು ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ಸಿ.ಸಿ. ಪಾಟೀಲ ಅವರ ಕಾಲಿಗೆರಗಿದ ಘಟನೆ ನರಗುಂದ ತಾಲೂಕು ಲಕಮಾಪುರದಲ್ಲಿ ಭಾನುವಾರ ನಡೆದಿದೆ. ಟೆಂಟ್‌ಗಳಲ್ಲಿ ವಾಸಿಸುತ್ತಿರುವ ನೆರೆ ಸಂತ್ರಸ್ತರ ಸಮಸ್ಯೆ ಆಲಿಸುತ್ತಿರುವ ವೇಳೆ ವೃದ್ಧೆಯೊಬ್ಬರು ಸಚಿವರ ಕಾಲಿಗೆರಗಿ, ಹೊಳಿ ಬಂದು ಎಲ್ಲವನ್ನೂ ಕೊಚ್ಚಿಕೊಂಡು ಹೋಗಿದೆ.

Advertisement

ಮನೆಯಿಲ್ಲದೇ ಟೆಂಟ್‌ ಹಾಕಿಕೊಂಡು ದಿನ ದೂಡುತ್ತಿದ್ದೇವೆ. ತಾತ್ಕಾಲಿಕ ಶೆಡ್‌ ಕಲ್ಪಿಸಿಕೊಡಿ. ನಾವು ನಿಮ್ಮನ್ನೇ ನಂಬಿದ್ದೇವೆ. ನಮ್ಮನ್ನು ಕೈ ಬಿಡಬೇಡಿ ಎಂದು ಸಚಿವರನ್ನು ತಬ್ಬಿಕೊಂಡು ಕಣ್ಣೀರು ಸುರಿಸಿದರು. ಯಾವುದೇ ಕಾರಣಕ್ಕೂ ಕೈ ಬಿಡುವ ಪ್ರಶ್ನೆಯೇ ಇಲ್ಲ. ಎರಡೇ ದಿನಗಳಲ್ಲಿ ಶೆಡ್‌ ನಿರ್ಮಿಸಿ ಕೊಡುವುದಾಗಿ ತಿಳಿಸಿದ ಸಚಿವರು ಆ ವೃದ್ಧೆಯನ್ನು ಸಂತೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next