Advertisement

ಸಚಿವ ಜಮೀರ್‌ ಮಾನಸಿಕ ಅಸ್ವಸ್ಥ: ಶಿವಕುಮಾರ ಉದಾಸಿ

06:10 PM Apr 22, 2019 | Lakshmi GovindaRaju |

ರಾಣಿಬೆನ್ನೂರ: “ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು ಪ್ರಧಾನಿ ಮೋದಿ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ಗಮನಿಸಿದರೆ ಅವರು ಮಾನಸಿಕ ಅಸ್ವಸ್ಥರಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

Advertisement

ಶೀಘ್ರವೇ ಜಮೀರ್‌ ಅವರು ಧಾರವಾಡದ ಮಾನಸಿಕ ಆಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲಿ’ ಎಂದು ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಸಲಹೆ ನೀಡಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, “ಎಲ್ಲ ಸಮಾಜದ ಮಹಿಳೆಯರನ್ನು ಗೌರವದಿಂದ ಕಾಣುವ ಪ್ರಧಾನಿ ಮೋದಿ ಅವರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡಲು ಜಮೀರ್‌ಗೆ ಯಾವುದೇ ನೈತಿಕತೆಯಿಲ್ಲ. ಅವರಿಗೆ ಸಂಸ್ಕೃತಿ, ಸಂಸ್ಕಾರವಿಲ್ಲ.

ತನ್ನ ಹಾಗೂ ತನ್ನ ಮನೆತನದ ಸಂಸ್ಕೃತಿಯನ್ನೂ ಅರಿಯದೆ ಮೋದಿ ಅವರ ಮನೆತನದ ಬಗ್ಗೆ ಮಾತನಾಡುವುದು ಸರಿಯಲ್ಲ, “ಜಮೀರ್‌ ಎಂದರೆ ಕುರಾನದಲ್ಲಿ ಆತ್ಮ ಅಂತಃಕರಣ’ ಎಂದು ಅರ್ಥೈಸಲಾಗುತ್ತದೆ. ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next