Advertisement

ಸಚಿವ ಯು.ಟಿ.ಖಾದರ್‌ ಹೇಳಿಕೆಗೆ ವಿಹಿಂಪ, ಬಜರಂಗ ದಳ ಖಂಡನೆ

12:39 PM Feb 27, 2017 | |

ವಿಟ್ಲ  : ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮಂಗಳೂರಿಗೆ ಆಗಮಿಸುವುದನ್ನು ವಿರೋಧಿಸಿ, ಫೆ.25ರಂದು ಕರೆ ನೀಡಿರುವ ಹರತಾಳದ ಸಂದರ್ಭ ಚಪ್ಪಲಿ ಪದ ಬಳಕೆ  ಮಾಡಿರುವ  ಸಚಿವ ಯು.ಟಿ. ಖಾದರ್‌  ಅವರ ಹೇಳಿಕೆ  ಬೇಜವಾಬ್ದಾರಿಯಿಂದ ಕೂಡಿದೆ. ಇದನ್ನು ವಿಟ್ಲ ಪ್ರಖಂಡ ವಿಹಿಂಪ, ಬಜರಂಗ ದಳ ತೀವ್ರವಾಗಿ ಖಂಡಿಸಿವೆ. ಈ ಹೇಳಿಕೆಯನ್ನು ಸಚಿವರು ಹಿಂಪಡೆಯಬೇಕು. ಹಿಂದೂ ಸಂಘಟನೆ, ಹಿಂದೂ ನಾಯಕರ ವಿರುದ್ಧ ಹಗುರವಾಗಿ ಮಾತನಾಡಕೂಡದು   ಎಂದು ವಿಟ್ಲ ವಿಹಿಂಪ ಮತ್ತು ಬಜರಂಗ ದಳ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿವೆ.

Advertisement

ನಾವು ಮುಖ್ಯಮಂತ್ರಿ ಪದವಿಯನ್ನು ವಿರೋಧಿಸುತ್ತಿರುವುದಲ್ಲ,  ಒಂದು ರಾಜ್ಯದ ಮುಖ್ಯಮಂತ್ರಿ ಮತ್ತೂಂದು ರಾಜ್ಯಕ್ಕೆ ಆಗಮಿಸುವ ಸಂಪ್ರದಾಯಕ್ಕೆ ಖಂಡಿತಾ ಅಭ್ಯಂತರವಿಲ್ಲ, ಪಕ್ಷದ ಸಮಾವೇಶಕ್ಕೆ ಆಗಮಿಸಿದರೂ ವಿರೋಧಿಸಬಾರದು. ಕೇರಳದಲ್ಲಿ ರಕ್ತದ ಓಕುಳಿಯನ್ನು ಹರಿಸುತ್ತಿರುವ ಅಪರಾಧ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿರುವ, ಕ್ರಿಮಿನಲ್‌ ಹಿನ್ನೆಲೆಯುಳ್ಳ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮಂಗಳೂರಿಗೆ ಆಗಮಿಸುವುದನ್ನು ವಿರೋಧಿಸಲಾಗಿದೆ ಅಷ್ಟೆ. ತುಳುನಾಡು ಸಾಮರಸ್ಯದ ನಾಡು. ಈ ಜಿಲ್ಲೆಗೆ ಬಂದು ಏಕತೆ, ಸೌಹಾರ್ದದ ಬಗ್ಗೆ ಮಾತನಾಡುವ ಅರ್ಹತೆ ಅವರಿಗಿಲ್ಲ ಎಂಬ ಉದ್ದೇಶಕ್ಕಾಗಿ ಪಿಣರಾಯಿ ವಿಜಯನ್‌ ವಿರುದ್ಧ ಹೋರಾಟ ಮಾಡಲಾಗಿದೆ ಎಂದು ಸಂಘಟನೆಗಳು ಸ್ಪಷ್ಟಪಡಿಸಿವೆ.

ಈ ಬಗ್ಗೆ ಉದ್ವೇಗಕ್ಕೊಳಗಾದ ಕರ್ನಾಟಕದ ಆಹಾರ ಸಚಿವ ಯು.ಟಿ.ಖಾದರ್‌ ಅವರು ಅನಾರೋಗ್ಯಕರ ಹೇಳಿಕೆ ನೀಡದೆ, ಗೌರವ ಉಳಿಸಿಕೊಳ್ಳಬೇಕು. ಉಳ್ಳಾಲದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಅಪರಾಧಿಗಳ ಬಂಧನ, ಗೋಕಳ್ಳರನ್ನು ಬಂಧಿಸುವವರ   ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಪ್ರಯತ್ನಿಸಬೇಕಾದ ಖಾದರ್‌ ಅವರಿಂದ ಪಾಠ ಕಲಿತುಕೊಳ್ಳುವ ಅಗತ್ಯ ಸಂಘ ಪರಿವಾರಕ್ಕಿಲ್ಲ ಎಂದು ಸಂಘಟನೆ ತಿಳಿಸಿದೆ.
 

Advertisement

Udayavani is now on Telegram. Click here to join our channel and stay updated with the latest news.

Next