Advertisement

ಆಸರೆ ಮನೆಗಳಿಗೆ ಸ್ಥಳಾಂತರಗೊಳ್ಳಿ : ಉಸ್ತುವಾರಿ ಸಚಿವ ಉಮೇಶ್ ಕತ್ತಿ

08:54 PM Jul 24, 2021 | Team Udayavani |

ಮಹಾಲಿಂಗಪುರ : ಹಳೆ ನಂದಗಾಂವ ಗ್ರಾಮದಲ್ಲಿ ಉಳಿದುಕೊಂಡಿರುವ ಕುಟುಂಬಸ್ಥರು ಹೊಸ ನಂದಗಾಂವ ಗ್ರಾಮದಲ್ಲಿ ನಿರ್ಮಿಸಿರುವ ಆಸರೆ ಮನೆಗಳಿಗೆ ಸ್ಥಳಾಂತರಗಗೊಂಡು ಪ್ರವಾಹದಿಂದ ಶಾಸ್ವತ ಮುಕ್ತಿ ಹೊಂದಿರಿ ಎಂದು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್ ಕತ್ತಿ ಹೇಳಿದರು.

Advertisement

ಶನಿವಾರ ಸಂಜೆ ಪ್ರವಾಹ ಪೀಡಿತ ನಂದಗಾಂವ ಮತ್ತು ಢವಳೇಶ್ವರ ಗ್ರಾಮಗಳಿಗೆ ಭೇಟಿ ನೀಡಿ, ಅಲ್ಲಿನ ಪ್ರವಾಹ ಪರಿಸ್ಥಿತಿಯನ್ನು ಅವಲೋಕ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಘಟಪ್ರಭಾ ನದಿಗೆ ಸದ್ಯ ೧ ಲಕ್ಷ ೩೭ ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ನೀರು ಸುತ್ತುವರೆದ ಕಾರಣ ಹಳೆ ನಂದಗಾಂವ ಗ್ರಾಮದಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಜೊತೆಗೆ ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಇರಲು ಅನುಕೂಲ ಇಲ್ಲದವರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದುಕೊಳ್ಳಲು ವಿನಂತಿಸಿದರು. ಆಸರೆ ಮನೆ ಹಂಚಿಕೆ ಸಮಸ್ಯೆಯನ್ನು ಸ್ಥಳೀಯ ಮಟ್ಟದಲ್ಲಿಯೇ ಬಗೆಹರಿಸಲು ಜಮಖಂಡಿ ಎಸಿ ಸಿದ್ದು ಹುಲ್ಲೋಳ್ಳಿ ಅವರಿಗೆ ಸೂಚಿಸಿದರು.

ಆಲಮಟ್ಟಿ ಜಲಾಶಯದಿಂದ ಬಿಡುತ್ತಿರುವ ೩.೫೦ ಲಕ್ಷ ಕ್ಯೂಸೆಕ್ ನೀರನ್ನು ೪.೫೦ ಲಕ್ಷ ಕ್ಯೂಸೆಕ್‌ಗೆ ಹೆಚ್ಚಿಸಲು ಸೂಚಿಸಲಾಗಿದೆ. ಇನ್ನೂ ಎರಡು ತಿಂಗಳು ಮಳೆಗಾಲ ಇರುವ ಕಾರಣ ಎಲ್ಲಾ ಜಲಾಶಯಗಳನ್ನು ಭರ್ತಿಮಾಡಿಕೊಂಡು ಹೆಚ್ಚಿನ ಪ್ರವಾಹ ಉಂಟಾಗದಂತೆ ಹಿಂದೆ ನೀರು ಬರುವ ಪ್ರಮಾಣ ನೋಡಿಕೊಂಡು ಜಲಾಶಯದಿಂದ ನೀರನ್ನು ಹೊರಹಾಕಲು ಸೂಚಿಸಲಾಗಿದೆ ಎಂದರು.

ತೇರದಾಳ ಶಾಸಕ ಸಿದ್ದು ಸವದಿ, ಜಮಖಂಡಿ ಎಸಿ ಸಿದ್ದು ಹುಲ್ಲೋಳ್ಳಿ, ರಬಕವಿ-ಬನಹಟ್ಟಿ ತಹಶೀಲ್ದಾರ ಸಂಜಯ ಇಂಗಳೆ, ಜಿಪಂ ಮಾಜಿ ಸದಸ್ಯ ಮಹಾಂತೇಶ್ ಹಿಟ್ಟಿನಮಠ, ಬಿಜೆಪಿ ಮುಖಂಡರಾದ ಮನೋಹರ ಶಿರೋಳ, ಚನ್ನಪ್ಪ ಪಟ್ಟಣಶೆಟ್ಟಿ, ಸಂಜು ಬಾರಕೋಲ, ರಾಮಚಂದ್ರ ಜಾಧವ, ಮಲ್ಲಪ್ಪ ಗುರವ, ಶಿವಾನಂದ ಹುಣಶ್ಯಾಳ, ನೊಡೆಲ್ ಅಧಿಕಾರಿಗಳಾದ ಎಚ್.ಎಸ್.ಚಿತ್ತರಗಿ, ಡಿ.ಬಿ.ಪಠಾಣ, ಕಂದಾಯ ಅಧಿಕಾರಿ ಬಿ.ಆರ್.ತಾಳಿಕೋಟಿ, ಗ್ರಾಮಲೆಕ್ಕಾಧಿಕಾರಿ ತ್ರಿವೇಣಿ ದೇವರಮನಿ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next