Advertisement

ತ್ರಿವಳಿ ತಲಾಖ್‌ ಮಸೂದೆಗೆ ತನ್ವೀರ್ ಸೇಠ್ ವಿರೋಧ

06:40 AM Dec 30, 2017 | Team Udayavani |

ಬೆಂಗಳೂರು: ತ್ರಿವಳಿ ತಲಾಖ್‌ ಮಸೂದೆಗೆ ವಿರೋಧ ವ್ಯಕ್ತಪಡಿಸಿರುವ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ತನ್ವೀರ್ ಸೇಠ್ ಮುಸ್ಲಿಂ ಸಮುದಾಯದ ವೈಯಕ್ತಿಕ ವಿಚಾರಗಳಲ್ಲಿ ಮಧ್ಯಪ್ರವೇಶ ಸಲ್ಲ ಎಂದು ಹೇಳಿದ್ದಾರೆ.

Advertisement

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡಿರುವ ತ್ರಿವಳಿ ತಲಾಖ್‌ಗೆ ಸಂಬಂಧಿಸಿದ ಮಸೂದೆಗೆ ನಾನೂ ಸೇರಿದಂತೆ ನಮ್ಮ ಸಮುದಾಯದ ವಿರೋಧ ಇದೆ ಎಂದು ತಿಳಿಸಿದರು.

ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೆ ಸಮಾನ ಹಕ್ಕು ನೀಡಿದೆ. ತಲಾಖ್‌  ಎಂಬುದು ವೈಯಕ್ತಿಕ ವಿಚಾರ. ಅದಕ್ಕೆ ಕಾನೂನು ಚೌಕಟ್ಟು ರೂಪಿಸಿ ಕಟ್ಟಿ ಹಾಕುವುದು ಸರಿಯಲ್ಲ ಎಂದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಸಮುದಾಯದಜನಪ್ರತಿನಿಧಿಗಳು,ಧಾರ್ಮಿಕ ಮುಖಂಡರ ಅಭಿಪ್ರಾಯವನ್ನು ಸಂಗ್ರಹಿಸಿ  ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next