Advertisement

ಶಿಕ್ಷಕರಿಗೆ ಸಚಿವ ಸುರೇಶ್‌ ಕುಮಾರ್‌ ಅಭಯ

10:51 PM Mar 18, 2020 | Team Udayavani |

ಬೆಂಗಳೂರು: ತಾಲೂಕುಗಳಲ್ಲಿ ಶೇ.20ರಷ್ಟು ಖಾಲಿ ಹುದ್ದೆಯಿದ್ದಾಗ ವರ್ಗಾವಣೆ ಸಮಸ್ಯೆ ಎದುರಾಗುವುದು ಪ್ರಮುಖ ವಿಷಯವಾಗಿದೆ. ಅದನ್ನು ಪರಿಹರಿಸಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

Advertisement

ವಿಧಾನ ಮಂಡಲದ ಉಭಯ ಸದನದಲ್ಲಿ ಶಿಕ್ಷಕರ ವರ್ಗಾವಣೆ ವಿಧೇಯಕ ಅಂಗೀಕಾರದ ನಂತರ ತಮ್ಮ ಫೇಸ್‌ಬುಕ್‌ ಖಾತೆ ಮೂಲಕ ಶಿಕ್ಷಕರಿಗೆ ಭರವಸೆಯ ಸಂದೇಶ ನೀಡಿದ್ದಾರೆ. ಶಿಕ್ಷಕರ ಎಲ್ಲ ಸಮಸ್ಯೆಗಳಿಗೂ ಇದು ರಾಮಬಾಣವಲ್ಲ ಎಂಬುದು ನನಗೆ ಚೆನ್ನಾಗಿ ತಿಳಿದಿದೆ.

ಆದರೆ, ಶಿಕ್ಷಕರ ಸಮಸ್ಯೆಗಳ ಶೇ.80ರಷ್ಟಕ್ಕೆ ಪರಿಹಾರ ದೊರಕುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಕಾಯ್ದೆಯಲ್ಲಿ ಅನುಕಂಪವಿದೆ. ಈಗ ಶೇ.20ರಷ್ಟು ಖಾಲಿ ಹುದ್ದೆಯದೊಂದು ಸಮಸ್ಯೆಯಿದೆ. ಬಹಳ ಶಿಕ್ಷಕರಿಗೆ ಇದೇ ಪ್ರಮುಖವಾಗಿ ರುವುದು. ಅದನ್ನೂ ಪರಿಹರಿಸಲು ಕ್ರಮ ಕೈಗೊಳ್ಳುತ್ತಿದ್ದೇನೆ ಎಂದು ಭರವಸೆ ನೀಡಿದ್ದಾರೆ.

ಶಿಕ್ಷಕರಿಗೆ ಮಾತು ಕೊಟ್ಟಂತೆ ಶಿಕ್ಷಕಸ್ನೇಹಿ ವರ್ಗಾವಣೆ ಕಾಯ್ದೆ ವಿಧಾನ ಮಂಡಲದ ಉಭಯ ಸದನದಲ್ಲಿ ಅಂಗೀಕಾರವಾಗಿದೆ. ಇದನ್ನು ಸಾಧ್ಯವಾಗಿ ಸಿದ ವಿಧಾನ ಸಭಾಧ್ಯಕ್ಷರು, ಪರಿಷತ್ತಿನ ಸಭಾಪತಿಗಳು ಮತ್ತು ಎಲ್ಲ ಸದಸ್ಯರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next