Advertisement

ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ; ರೈಲ್ವೇ ಆಸ್ತಿ ಹಾನಿ-ಕಂಡಲ್ಲಿ ಗುಂಡು

10:04 AM Dec 19, 2019 | mahesh |

ಹುಬ್ಬಳ್ಳಿ: ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ರೈಲ್ವೇ ಆಸ್ತಿಗೆ ಹಾನಿ ಮಾಡುತ್ತಿರುವ ಘಟನೆಗಳು ನಡೆಯುತ್ತಿದ್ದು, ಅಗತ್ಯ ಬಿದ್ದರೆ ಇಂತಹ ಸಮಾಜ ಘಾತಕ ಶಕ್ತಿಗಳಿಗೆ ಕಂಡಲ್ಲಿ ಗುಂಡು ಹಾಕಬೇಕು ಎಂದು ರಾಜ್ಯ ಸರಕಾರಗಳಿಗೆ ಸೂಚಿಸುತ್ತೇನೆ ಎಂದು ಕೇಂದ್ರ ರೈಲ್ವೇ ಸಹಾಯಕ ಸಚಿವ ಸುರೇಶ ಅಂಗಡಿ ಎಚ್ಚರಿಕೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಂತಿಯುತ ಪ್ರತಿಭಟನೆಗೆ ಎಲ್ಲರ ಬೆಂಬಲವಿರುತ್ತದೆ. ಆದರೆ ಹಿಂಸಾಚಾರದ ಹೋರಾಟ ವನ್ನು ಯಾರೂ ಸಹಿಸುವುದಿಲ್ಲ. ರೈಲ್ವೇ ಆಸ್ತಿ ಹಾನಿ ಮಾಡುವ ದುಷ್ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ಸಮಾಜಘಾತುಕ ಶಕ್ತಿಗಳಿಗೆ ಕಂಡಲ್ಲಿ ಗುಂಡು ಹಾಕಬೇಕು. ಹಿಂಸಾಚಾರಕ್ಕೆ ಇಳಿದಿರುವವರು ವಲಸಿಗರೇ ಹೊರತು ನಮ್ಮ ದೇಶದವರಲ್ಲ ಎಂದರು.

ರೈಲುಗಳಿಗೆ ಬೆಂಕಿ ಹಚ್ಚುವುದು, ನಿಲ್ದಾಣಗಳಲ್ಲಿನ ವಸ್ತುಗಳನ್ನು ನಾಶ ಮಾಡುತ್ತಿರುವುದನ್ನು ನೋಡಿದರೆ ಆಕ್ರೋಶ ಉಂಟಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next