Advertisement

ಎಂ.ಇ.ಎಸ್ ಪುಂಡಾಟಿಕೆಗೆ ತಕ್ಕ ಕಾನೂನು ಶಿಕ್ಷೆ ಆಗಲಿದೆ: ಸಚಿವ ಶಿವರಾಮ್ ಹೆಬ್ಬಾರ್

07:34 PM Dec 19, 2021 | Team Udayavani |

ಅಂಕೋಲಾ : ಎಂ.ಇ.ಎಸ್ ಕಾರ್ಯಕರ್ತರು ಈ ನಾಡಿನ ವಿಷಯದಲ್ಲಿ ತೋರುತ್ತಿರುವ ಪುಂಡಾಟಿಕೆಯನ್ನು ನಿಲ್ಲಿಸದೆ ಹೊದರೆ ಸರ್ಕಾರ ಅವರ ವಿರುದ್ಧ ಕಠಿಣ ನಿಲುವನ್ನು ತೆಗೆದುಕೊಳ್ಳಲು ಸರಕಾರ ಹಿಂಜರಿಯುವುದಿಲ್ಲ ಎಂದು ಉ.ಕ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.

Advertisement

ಅಂಕೋಲಾದಲ್ಲಿ ಮಾಧ್ಯಮ ಪ್ರತಿನಿದಿಗಳೊಂದಿಗೆ ಮಾತನಾಡಿದ ಅವರು , ಎಂಇಎಸ್ ಅವರಿಗೆ ಕಾನೂನನ್ನು ಕೈಗೆ ತೆಗೆದುಕೊಳ್ಳಲು ಬಿಡದೆ ಅದು ಎಷ್ಟೇ ದೊಡ್ಡ ಶಕ್ತಿ ಇದ್ದರು ಮೆಟ್ಟಿ ನಿಲ್ಲುತ್ತೇವೆ. ಕಳೆದ ಹಲವು ವರ್ಷಗಳಿಂದ ಎಂ.ಇ.ಎಸ್ ಕಾರ್ಯಕರ್ತರು ಬೆಳಗಾವಿಯಲ್ಲಿ ಹಲವಾರು ರೀತಿಯಲ್ಲಿ ಪುಂಡಾಟಿಕೆಯನ್ನು ನಡೆಸುತ್ತಾ ಬಂದಿದ್ದು ವಿಧಾನಸಭೆಯಲ್ಲಿ 5 ರಷ್ಟು ಇದ್ದ ಎಂ.ಇ.ಎಸ್ ಶಾಸಕರ ಸಂಖ್ಯೆ ಈಗ ಸೊನ್ನೆಗೆ ಬಂದು ತಲುಪಿದೆ, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅವರ ಸದಸ್ಯರ ಸಂಖ್ಯೆ ಬೆರಳೆಣಿಕೆಗೆ ಬಂದು ತಲುಪಿದೆ ಬೆಳಗಾವಿಯ ಜನ ಎಂ.ಇ.ಎಸ್ ಅಸ್ಥಿತ್ವ ಕಳೆದುಕೊಳ್ಳುವಂತೆ ಮಾಡಿದ್ದಾರೆ.

ಕಾನೂನನ್ನು ಕೈಗೆ ತೆಗೆದುಕೊಂಡು ಮಾಡುವ ಪುಂಡಾಟಿಕೆ ವಿರುದ್ಧ ಖಡಾಖಂಡಿತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಹೆಬ್ಬಾರ್ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next