Advertisement

Hijab controversy: ಹಿಜಾಬ್‌ ನಿಷೇಧ ಆದೇಶ ವಾಪಾಸ್‌ ಪಡೆಯುತ್ತೇವೆ; ಸತೀಶ್ ಜಾರಕಿಹೊಳಿ

02:46 PM Dec 25, 2023 | Team Udayavani |

ಬೆಳಗಾವಿ: ನಮ್ಮ ಸರಕಾರ ಬಂದ ಮೇಲೆ ಹಿಜಾಬ್ ನಿಷೇಧ ಆದೇಶ ವಾಪಸ್ ಪಡೆಯುತ್ತೇವೆ ಎಂದು ಹೇಳಿದ್ದೆವು. ಅದರಂತೆ ವಾಪಸ್ ಪಡೆಯುತ್ತೇವೆ.  ಇದನ್ನು ಚುನಾವಣಾ ಪ್ರಣಾಳಿಕೆಯಲ್ಲೇ ಹೇಳಿದ್ದೆವು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ನ್ಯಾಯಾಲಯಕ್ಕೆ ಸರಕಾರದ ನಿಲುವು ತಿಳಿಸುತ್ತೇವೆ. ರಾಜ್ಯದಲ್ಲಿ ಸುಮಾರು 10 ಸಾವಿರ ಕೋಟಿ ವೆಚ್ಚದ 15ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಒಂದಲ್ಲಾ ಒಂದು ಕಾರಣದಿಂದ ವಿಳಂಬವಾಗಿವೆ. ಇದುವರೆಗೆ ಎರಡು ಸಾವಿರ ಕೋಟಿ ವೆಚ್ಚಮಾಡಲಾಗಿದೆ ಎಂದರು.

ವಿವಾದಾತ್ಮಕ ಹೇಳಿಕೆ ನೀಡಿದ ಸಕ್ಕರೆ ಸಚಿವ ಶಿವಾನಂದ ಪಾಟೀಲ:

ಬೆಳಗಾವಿ: ಕೃಷ್ಣಾ ನದಿ ನೀರು ಪುಕ್ಕಟೆ ಸಿಗುತ್ತದೆ. ಪುಕ್ಕಟೆ ವಿದ್ಯುತ್ ಸಿಗುತ್ತದೆ. ಬೀಜ ಮತ್ತು ಗೊಬ್ಬರವನ್ನೂ ಕೊಟ್ಟರು. ಇಷ್ಟೆಲ್ಲಾ ಆದ ಮೇಲೂ ಬರಗಾಲ ಬರಲಿ ಎಂಬುದು ರೈತರ ಆಸೆ‌ . ನೀವು ಬ್ಯಾಡ ಅಂದರೂ ಮೂರ್ನಾಲ್ಕು ವರ್ಷಕ್ಕೊಮ್ಮೆ ಬರಗಾಲ ಬಂದೇ ಬರುತ್ತದೆ‌. ಈಗ ಬರಗಾಲ ಬಂದಿದೆ. ನಮ್ಮ ಮುಖ್ಯಮಂತ್ರಿಗಳು ಬಡ್ಡಿ ಮನ್ನಾ ಮಾಡಿದ್ದಾರೆ. ಪ್ರತಿ ಬಾರಿ ನಮ್ಮ ನೆರವಿಗೆ ಬನ್ನಿ ಎಂದರೆ ಕಷ್ಟವಾಗುತ್ತದೆ ಎಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next