Advertisement

ಸತ್ಯದ ಮಾರ್ಗದಲ್ಲಿದ್ದವರಿಗೆ ಒಳ್ಳೆಯದಾಗುತ್ತದೆ: ಪಿಎ ಬಂಧನ ವಿಚಾರಕ್ಕೆ ರಾಮುಲು ಪ್ರತಿಕ್ರಿಯೆ

04:31 PM Jul 05, 2021 | Team Udayavani |

ಚಿತ್ರದುರ್ಗ: ಪಿಎ ರಾಜಣ್ಣ ಬಂಧನ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅಧಿಕಾರಿಗಳು ವಿಚಾರಣೆ ಮಾಡಿ ಬಿಡುಗಡೆ ಸಹ ಮಾಡಿದ್ದಾರೆ. ಸತ್ಯ ಏನೆಂದು ಇದರಿಂದ ಗೊತ್ತಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಬಿ ಶ್ರೀರಾಮುಲು ಹೇಳಿದರು.

Advertisement

ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು ರಾಮಗಿರಿ ಗ್ರಾಮದಲ್ಲಿ ಮಾತನಾಡಿದ ಅವರು, ಯಾವುದೇ ಸಂದರ್ಭದಲ್ಲಿ ಯಾರೂ ಧರ್ಮ ಬಿಡಬಾರದು. ಧರ್ಮ ಬಿಟ್ಟರೆ ಅಪಾಯ, ಗಂಡಾಂತರ ಎಂಬುದು ತಿಳಿಯಬೇಕು. ಪ್ರಮಾಣ ವಚನ ಸ್ವೀಕಾರ ವೇಳೆಯೂ ಧರ್ಮ ಪಾಲಿಸುವ ಕೆಲಸ ಮಾಡತ್ತೇವೆ ಎಂಥಾ ಪರಿಸ್ಥಿತಿಯಲ್ಲೂ ನಾನು‌ ಧರ್ಮ ಬಿಟ್ಟು ಹೋಗಲ್ಲ. ಕಾನೂನು ಚೌಕಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ ಎನ್ನುತ್ತೇವೆ. ಸತ್ಯದ ಮಾರ್ಗದಲ್ಲಿದ್ದವರಿಗೆ ಒಳ್ಳೆಯದಾಗುತ್ತದೆ ಎಂದರು.

ಇದನ್ನೂ ಓದಿ:ನಾಯಿ ಸಿಂಹವನ್ನೂ ನಾಯಿ ಎಂದೆ ಭಾವಿಸುತ್ತದೆ: ಸಿದ್ದರಾಮಯ್ಯ ಹೇಳಿಕೆಗೆ ರವಿ ಕುಮಾರ್ ತಿರುಗೇಟು

ರಾಜಣ್ಣ ಪ್ರಕರಣದ ಬಗ್ಗೆ ವಿಚಾರಣೆ ನಡೆಯುತ್ತಿದೆ. ಆ ಬಗ್ಗೆ ಪ್ರತಿಕ್ರಿಯಿಸಲ್ಲ. ಈಗಾಗಲೇ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ಬಳಿ ಮಾತಾಡಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next