Advertisement

ಮಠಾಧೀಶರ ಬಗ್ಗೆ ಮಾತನಾಡುವ ಕ್ರಮ ಸರಿಯಲ್ಲ: ಆರ್‌. ಅಶೋಕ್‌

11:34 PM Mar 25, 2022 | Team Udayavani |

ಬೆಂಗಳೂರು: ಮಠಾಧೀಶರ ವಸ್ತ್ರದ ಕುರಿತು ವಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಅಭಿಪ್ರಾಯಕ್ಕೆ ತಿರುಗೇಟು ನೀಡಿದ ಕಂದಾಯ ಸಚಿವ ಆರ್‌. ಅಶೋಕ್‌, ಸಿದ್ದರಾಮಯ್ಯನವರು ಅನುಭವಿ ರಾಜಕಾರಣಿ.

Advertisement

ಅವರು ಸಹ ಮಠಗಳಿಗೆ ಹೋಗುತ್ತಾರೆ. ಅಲ್ಲಿಯೇ ಮಠಾಧೀಶರನ್ನು ಪ್ರಶ್ನೆ ಮಾಡಬಹುದಿತ್ತು. ಇಲ್ಲಿ ಬಂದು ಮಠಾಧೀಶರ ಬಟ್ಟೆ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಕಾಂಗ್ರೆಸ್‌ ಪೂರ್ಣ ಬೆಂಬಲದಿಂದಲೇ ಹಿಜಾಬ್‌ ಪ್ರಕರಣ ಇಷ್ಟು ಬೆಳೆದಿರುವುದು. ಕೋರ್ಟ್‌ ಆದೇಶದಿಂದ ಈಗ ಏನು ಮಾಡಬೇಕು ಅಂತ ತಿಳಿಯುತ್ತಿಲ್ಲ. ಅದಕ್ಕಾಗಿ ಸಮಾಜ ಸೇವೆ ಮಾಡುವ ಮಠಾಧೀಶರ ಬಗ್ಗೆ ಮಾತನಾಡುತ್ತಾರೆ.

ಇದನ್ನೂ ಓದಿ:ಯಾವ ಸ್ವಾಮೀಜಿಗಳ ಬಗ್ಗೆಯೂ ನಾನು ಅಗೌರವದಿಂದ ಮಾತನಾಡಿಲ್ಲ : ಸಿದ್ದು

ಕಾಂಗ್ರೆಸ್‌ ನವರಿಗೆ ಸಂವಿಧಾನ ಬಗ್ಗೆ ನಂಬಿಕೆ ಇದ್ದರೆ ಮಕ್ಕಳಿಗೆ ತಿಳಿ ಹೇಳಬೇಕಿತ್ತು. ಹಿಜಾಬ್‌ ವಿರುದ್ದ ತೀರ್ಪು ಬಂದರೂ ಸಹ, ಮಕ್ಕಳು ಹಾಗೂ ಪೋಷಕರಿಗೆ ಬುದ್ದಿ ಹೇಳುವ ಕೆಲಸ ಮಾಡುತ್ತಿಲ್ಲ ಎಂದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next