Advertisement

ಡಿಕೆಶಿ ಯಾರ ಕೈ ಹಿಡಿದು ಮೇಲೆತ್ತುವರೋ ಅವರು ಬೀದಿಗೆ:  ಸಚಿವ ಆರ್‌.ಅಶೋಕ್‌ ಲೇವಡಿ

09:22 PM Aug 04, 2022 | Team Udayavani |

ಚನ್ನರಾಯಪಟ್ಟಣ: ಡಿ.ಕೆ.ಶಿವಕುಮಾರ್‌ ಯಾರ ಕೈಹಿಡಿದು ಮೇಲೆ ಎತ್ತುತ್ತಾರೋ ಅವರು ಬೀದಿಗೆ ಬರುತ್ತಾರೆ. ಈಗ ಸಿದ್ದರಾಮಯ್ಯ ಅವರ ಸರದಿ ಬಂದಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಲೇವಡಿ ಮಾಡಿದ್ದಾರೆ.

Advertisement

ತಾಲೂಕಿನ ಶ್ರವಣಬೆಳಗೊಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಮಂಡ್ಯದಲ್ಲಿ ಡಿ.ಕೆ.ಶಿವಕುಮಾರ್‌ ಜೆಡಿಎಸ್‌ ಪಕ್ಷದ ಎಚ್‌.ಡಿ.ಕುಮಾರಸ್ವಾಮಿ ಅವರ ಕೈ ಹಿಡಿದು ಮೇಲೆತ್ತಿ ಜೋಡೆತ್ತು ಎಂದು ಹೇಳಿದ್ದರು, ನಂತರ ಕುಮಾರಸ್ವಾಮಿ ಪಾಡೇನಾಯ್ತು? ಅವರು ಬೀದಿಗೆ ಬಂದರು. ಈಗ ಸಿದ್ದರಾಮಯ್ಯ ಅವರನ್ನು ಬೀದಿಗೆ ತರುವ ಉದ್ದೇಶದಿಂದ ಕೈ ಹಿಡಿದು ಮೇಲೆತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಬಲವಂತದ ಆಲಿಂಗನ: ಡಿಕೆಶಿ ದಾವಣಗೆರೆಯ ವೇದಿಕೆ ಮೇಲೆ ಸಿದ್ದರಾಮಯ್ಯ ಅವರನ್ನು ಆಲಿಂಗನ ಮಾಡಿದ್ದು ಪ್ರೀತಿಯಿಂದಲ್ಲ. ಅದು ಬಲವಂತದ ಅಲಿಂಗನ. ರಾಹುಲ್‌ಗಾಂಧಿ ಕೈ ಸನ್ನೆ ಮಾಡಿದ ಮೇಲೆ ಒಲ್ಲದ ಮನಸ್ಸಿನಲ್ಲಿ ಆಲಿಂಗನವಾಗಿದೆ. ಧೃತರಾಷ್ಟ್ರನ ಆಲಿಂಗನದಲ್ಲಿ ಯಾರಿಗೆ ತೊಂದರೆ ಆಗಿದೆ ಎನ್ನುವುದು ಗೊತ್ತಿದೆ. ಸಿದ್ದರಾಮಯ್ಯ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next