Advertisement

ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣಗೆ ಕೋವಿಡ್-19 ಪಾಸಿಟಿವ್ ದೃಢ

03:55 PM Sep 10, 2020 | keerthan |

ಬೀದರ್: ಪಶು ಸಂಗೋಪನೆ, ಬೀದರ- ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರಿಗೆ ಕೋವಿಡ್-19 ಪಾಸಿಟಿವ್ ಇರುವುದು ದೃಢಪಟ್ಟಿದೆ.

Advertisement

ಇತ್ತೀಚೆಗಷ್ಟೇ ಅವರ ಕಾರು ಚಾಲಕ, ಗನ್ ಮ್ಯಾನ್, ಆಪ್ತ ಸಹಾಯಕರಿಗೆ ಕೋವಿಡ್ ಪಾಸಿಟಿವ್ ಬಂದ ಕಾರಣ ಸಚಿವರು ಕ್ವಾರಂಟೈನ್ ಗೆ ಒಳಗಾಗಿದ್ದರು. ಬುಧವಾರ ಸಚಿವರು ಸ್ವತಃ ವೈದ್ಯರನ್ನು ಕರೆಯಿಸಿ ಪರೀಕ್ಷಿಸಿಕೊಂಡಾಗ ಸೋಂಕು ಧೃಢಪಟ್ಟಿದ್ದು, ಅವರೊಂದಿಗೆ ಅವರ ಅಣ್ಣನ ಮಗ ದಿಲೀಪ ಚವ್ಹಾಣ ಅವರಿಗೂ ಸೋಂಕು ಧೃಢಪಟ್ಟಿದೆ.

ಇದನ್ನೂ ಓದಿ: ಚೀನಾ ಬಿಕ್ಕಟ್ಟು ಗಂಭೀರ: ಪಾಂಗಾಂಗ್‌ನ “ಫಿಂಗರ್‌ 3′ ಬಳಿ ಡ್ರ್ಯಾಗನ್‌ನ ಸೇನಾ ನಿರ್ಮಾಣ ಪತ್ತೆ

ಬೀದರ ಸೇರಿ ವಿವಿಧ ಜಿಲ್ಲೆ ಹಾಗೂ ಬೆಂಗಳೂರು ಪ್ರವಾಸ ಹಿನ್ನಲೆಯಲ್ಲಿ ಸೋಂಕು ತಗುಲಿರುವ ಸಾಧ್ಯತೆ ಇದೆ. ಇತ್ತೀಚೆಗೆ ತಮ್ಮ ಸಂಪರ್ಕಕ್ಕೆ ಬಂದವರು ಎಚ್ಚರಿಕೆ ವಹಿಸಬೇಕೆಂದು ಸಚಿವ ಚವ್ಹಾಣ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next