Advertisement

ಭಕ್ತಿಗೆ ಅಡ್ಡಿಯಾಗದ ರಕ್ಷಣಾ ಸಚಿವೆ !

01:58 AM Mar 28, 2019 | Team Udayavani |

ಉಡುಪಿ: ಮಂಗಳವಾರ ಉಡುಪಿಗೆ ಆಗಮಿಸಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಸರಳ ನಡೆಯ ಮೂಲಕ ಗಮನ ಸೆಳೆದರು. ಶ್ರೀಕೃಷ್ಣ ಮಠ ಭೇಟಿಯ ಸಂದರ್ಭದಲ್ಲಿ ಸಾಮಾನ್ಯ ಭಕ್ತನೋರ್ವ ಕನಕನ ಕಿಂಡಿಯಿಂದ ಶ್ರೀಕೃಷ್ಣ ದರ್ಶನ ಪಡೆಯುತ್ತಿದ್ದಾಗ ಅಲ್ಲಿಗೆ ಆಗಮಿಸಿದ ರಕ್ಷಣಾ ಸಚಿವರು ಆತನ ಭಕ್ತಿಗೆ ಅಡ್ಡಿಯಾಗಬಾರದೆಂದು ನಿಮಿಷಗಳ ಕಾಲ ಕಾದು ನಿಂತರು.

Advertisement

ಸಚಿವೆ ನಿರ್ಮಲಾ ಸೀತಾರಾಮ್‌ ಅವರನ್ನು ವೇದಘೋಷದೊಂದಿಗೆ ಬರಮಾಡಿಕೊಳ್ಳಲಾಗಿತ್ತು. ಆರಂಭದಲ್ಲಿ ಅವರು ಸಂಪ್ರದಾಯದಂತೆ ಕನಕನ ಕಿಂಡಿಯತ್ತ ತೆರಳಿದರು. ಆಗ ಅಲ್ಲೊಬ್ಬ ಭಕ್ತ ಸಚಿವರು ಬಂದಿರುವುದು ಗಮನಕ್ಕೆ ಬಾರದೆ ತನ್ಮಯನಾಗಿ ದೇವರ ದರ್ಶನ ಪಡೆಯುತ್ತಿದ್ದ.

ಪೊಲೀಸರು ಆತನನ್ನು ಬದಿಗೆ ಸರಿಸಲು ಮುಂದಾದಾಗ ಅದನ್ನು ಗಮನಿಸಿದ ಸಚಿವೆ, ಭಕ್ತನಿಗೆ ದರ್ಶನ ಮಾಡುವುದಕ್ಕೆ ಅಡ್ಡಿ ಮಾಡುವುದು ಬೇಡವೆಂದು ಸೂಚಿಸಿ, ಆತ ದರ್ಶನ ಪಡೆಯುವ ವರೆಗೆ ಅಲ್ಲೇ ಕಾದು ನಿಂತರು. ಬಳಿಕ ಅವರು ದೇವರ ದರ್ಶನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next