Advertisement

ದೇವೇಗೌಡರ ಕುಟುಂಬದ ರಾಜಕೀಯ ಅವನತಿ ಸನ್ನಿಹಿತ: ಕೇಂದ್ರ ಸಚಿವ ಕೃಷನ್‌ ಪಾಲ್‌ ಗುರ್ಜಾಲ್‌

09:24 PM Jul 07, 2022 | Team Udayavani |

ಹಾಸನ: ಹರಿಯಾಣದಲ್ಲಿ ದೇವಿಲಾಲ್‌ ಬಳಿಕ ಅವರ ಕುಟುಂಬದವರು ಜನರ ವಿಶ್ವಾಸ ಕಳೆದುಕೊಂಡರು. ಕರ್ನಾಟಕದಲ್ಲೂ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ  ಕುಟುಂಬದವರೂ ದೇವಿಲಾಲ್‌ ಕುಟುಂಬದವರ ಹಾದಿಯಲ್ಲಿದ್ದಾರೆ ಎಂದು  ಕೇಂದ್ರ ಇಂಧನ ಮತ್ತು ಬೃಹತ್‌ ಕೈಗಾರಿಕೆ ಖಾತೆ ರಾಜ್ಯ ಸಚಿವ ಕೃಷನ್‌ ಪಾಲ್‌ ಗುರ್ಜಾಲ್‌ ಅಭಿಪ್ರಾಯಪಟ್ಟರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವೇಗೌಡರ ಬಗ್ಗೆ ಜನರಿಗೆ ವಿಶ್ವಾಸವಿದೆ. ಆದರೆ ಅವರಿಗೆ ವಯಸ್ಸಾಗಿದ್ದು, ಸಕ್ರಿಯ ರಾಜಕಾರಣಕ್ಕೆ ಅವರ ಆರೋಗ್ಯ ಸಹಕರಿಸುತ್ತಿಲ್ಲ. ಹರಿಯಾಣದಲ್ಲಿ ದೇವಿಲಾಲ್‌ ಬಳಿಕದ ಪೀಳಿಗೆ ಹೇಗೆ ದೇವಿಲಾಲ್‌ ಹೆಸರನ್ನು ಹಾಳು ಮಾಡಿತೋ ಹಾಗೇ ದೇವೇಗೌಡರ ಮುಂದಿನ ಪೀಳಿಗೆಯೂ ಸಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next