Advertisement

Minister K. N. Rajanna: ಶಿವರಾಮು ಟೀಕೆಗೆ ಕೇರ್‌ ಮಾಡಲ್ಲ: ಸಚಿವ ಕೆ. ಎನ್‌.ರಾಜಣ್ಣ

04:42 PM Jan 27, 2024 | Team Udayavani |

ಹಾಸನ: ಜಿಲ್ಲಾ ಕಾಂಗ್ರೆಸ್‌ನಲ್ಲಿ ಮಾಜಿ ಸಚಿವ ಬಿ. ಶಿವರಾಮು, ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರ ನಡುವಿನ ವಾಕ್ಸಮರದ ಕುರಿತು ಸಹಕಾರ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಕೆ. ಎನ್‌.ರಾಜಣ್ಣ ಕೆಂಡಾಮಂಡಲರಾದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರಿಬ್ಬರ ಮಾತುಗಳನ್ನು ನಾಯಕರು ಗಮನಿಸಿದ್ದಾರೆ. ಅದಕ್ಕೆ ಹೆಚ್ಚು ಮಹತ್ವ ಕೊಡಬೇಕಿಲ್ಲ. ನಾನು ಕೆಲಸ ಮಾಡ್ತಾ ಇಲ್ಲ ಎಂದರೆ ಅವರೇ ಮಾಡಿಕೊಳ್ಳಲಿ ಬಿಡಿ. ನನ್ನನ್ನ ಯಾರೂ ಕೇಳ್ಳೋ ಹಾಗಿಲ್ಲ, ಸಿಎಂ ಮತ್ತು ನಮ್ಮ ಅಧ್ಯಕ್ಷರು ನನ್ನನ್ನು ಕೇಳಬೇಕಷ್ಟೇ. ಶಿವರಾಮು ಅವರೆಲ್ಲಾ ನನಗೆ ಲೆಕ್ಕಕ್ಕೆ ಇಲ್ಲ ಎಂದು ಸಚಿವರು ತಮ್ಮನ್ನ ಕಡೆಗಣಿಸುತ್ತಿದ್ದಾರೆ ಎಂಬ ಶಿವರಾಮು ಆರೋಪಕ್ಕೆ ಕೆ.ಎನ್‌. ರಾಜಣ್ಣ ಅವರು ತಿರುಗೇಟು ನೀಡಿದರು.

ಕ್ಷೇತ್ರದಲ್ಲಿ ಸಭೆ ಕರೆದು ಆಹ್ವಾನಿಸಲಿ ಹೋಗುವೆ : ಜಿಲ್ಲಾ ಸಚಿವರು, ಮುಖಂಡರು, ಕಾರ್ಯಕರ್ತರ ಸಭೆ ಮಾಡಿಲ್ಲ ಶಿವರಾಮು ಆರೋಪಕ್ಕೆ, ಹೌದು ನಾನು ಮಾಡೋದಿಲ್ಲ ಏನೀಗ, ಮಾಡಬೇಕು ಅಂತಾ ರೂಲ್ಸ್‌ ಇದೆಯಾ? ಯಾವನು ಆರೋಪ ಮಾಡ್ತಿದ್ದಾನೆ, ಅವನು ಆ ಕ್ಷೇತ್ರದಲ್ಲಿ ಚುನಾವಣೆಗೆ ನಿಂತಿರಲಿಲ್ಲವೇ, ಅವನೇ ಸಭೆ ಕರೀಲಿ, ಮಂತ್ರಿ ಬರಲಿ ಎಂದು ಹೇಳಲಿ, ನಾವೇ ಸಭೆ ಮಾಡಿ ಅವರನ್ನು ಕರೆಸಿ ಕೂರಿಸಬೇಕಾ? ಅವರ ಕ್ಷೇತ್ರದಲ್ಲಿ ಸಭೆ ಕರೆದು ಆಹ್ವಾನಿಸಲಿ ಹೋಗುವೆ, ನಾನೇ ಹೋಗಿ ಸಭೆ ಸೇರಿಸಿ ವೇದಿಕೆ ಮೇಲೆ ಕೂರಿಸಿ ಹೂವಿನ ಹಾರ ಹಾಕೋದು ನನ್ನ ಕೆಲಸ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನೀತಿಗೆಟ್ಟವರು ಕಾಂಗ್ರೆಸ್‌ಗೆ ಬರ್ತಾರೆ ಎಂಬ ಟೀಕೆಗೂ ನೀತಿಗೆಟ್ಟವರು ಯಾರು ಎಂದು ಚುನಾವಣೆಯಲ್ಲಿ ಜನ ತೋರಿಸಿದ್ದಾರೆ. ಅದನ್ನ ನಾನು ಹೇಳಬೇಕಾ?, ಸರಿ ತಪ್ಪು ತೀರ್ಮಾನ ಮಾಡೋದು ಜನ ಅಲ್ವಾ?, ನಾನು ಯಾವ ಶಿವರಾಮು ಅಥವಾ ಯಾರಿಗೂ ಕೇರ್‌ ಮಾಡೋದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಗದೀಶ್‌ ಶೆಟ್ಟರ್‌ ಮೇಲೆ ವೈಯಕ್ತಿಕ ಆರೋಪ ಸಲ್ಲ: ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಮೊದಲು ಆರ್‌ ಎಸ್‌ಎಸ್‌ ಸಿದ್ಧಾಂತದಿಂದ ಬಂದವರು. ಕಾಂಗ್ರೆಸ್‌ ನಲ್ಲಿ ಒಗ್ಗಲಿಲ್ಲ ಎಂದು ಮರಳಿ ಬಿಜೆಪಿಗೆ ಹೋಗಿದ್ದಾರೆ. ಕಾಂಗ್ರೆಸ್‌ನಲ್ಲಿ ನನ್ನನ್ನು ಚೆನ್ನಾಗಿ ನೋಡಿಕೊಂಡರು ಎಂದು ಹೇಳಿದ್ದಾರೆ. ನಾನು ಮೋದಿ ಅವರನ್ನು ಮತ್ತೆ ಪ್ರಧಾನ ಮಂತ್ರಿ ಮಾಡಬೇಕು ಎಂದು ಬಿಜೆಪಿಗೆ ಮರಳಿದ್ದೇನೆ ಎಂದಿದ್ದಾರೆ. ಹಾಗಾಗಿ ಅವರ ಮೇಲೆ ವೈಯಕ್ತಿಕ ಆರೋಪ ಮಾಡೋದು ಸಾಧುವಲ್ಲ ಎಂದರು.

ಇದೇ ವೇಳೆ ಕಾಂಗ್ರೆಸ್‌ ಜಗದೀಶ್‌ ಶೆಟ್ಟರ್‌ಗೆ ಮಂತ್ರಿ ಮಾಡದೇ ಅನ್ಯಾಯ ಮಾಡಿತು ಎಂಬ ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆಗೆ, ಹಿಂದೆ ಬಸವರಾಜ ಬೊಮ್ಮಾಯಿ ಇದ್ದಾಗ ಅವರನ್ನೇಕೆ ಮಂತ್ರಿ ಮಾಡಲಿಲ್ಲ. ರಾಜಕೀಯಕ್ಕಾಗಿ ಹೀಗೆಲ್ಲಾ ಹೇಳಬಾರದು ಎಂದು ಹೇಳಿದರು.

Advertisement

ಲಕ್ಷ್ಮಣ ಸವದಿ ಬಿಜೆಪಿಗೆ ಹೋಗಲ್ಲ : ಲಕ್ಷ್ಮಣ್‌ ಸವದಿ ಕೂಡಾ ಬಿಜೆಪಿ ಸೇರ್ತಾರೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ ಬಗ್ಗೆ ನಾನು ಸವದಿ ಅವರೊಂದಿಗೆ ನಿನ್ನೆ ಮಾತನಾಡಿದ್ದೇನೆ. ಲಕ್ಷ್ಮಣ್‌ ಸವದಿ ಅವರು ನನ್ನ ಉತ್ತಮ ಸ್ನೇಹಿತರು. ನಾನು ಯಾವುದೇ ಕಾರಣಕ್ಕೂ ಹೋಗೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌.ರಾಜಣ್ಣ ತಿಳಿಸಿದರು.

ಓಟಿಗಾಗಿ ಮೋದಿ ರಾಮನ ಹೆಸರೇಳ್ತಾರೆ: ಸಚಿವ : ರಾಮ ಮಂದಿರ ವಿಚಾರದಲ್ಲಿ ಮತ್ತೂಮ್ಮೆ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ ರಾಜಣ್ಣ, ನಾವೂ ರಾಮನ ಭಕ್ತರು, ನಾವು ಪೂಜೆ ಮಾಡೋದು ದಶರಥ ರಾಮ ನನ್ನು ಮೋದಿ ರಾಮನನ್ನಲ್ಲ ಎನ್ನುವ ಮೂಲಕ ಸಹಕಾರ ಸಚಿವ ಕೆ. ಎನ್‌. ರಾಜಣ್ಣ ರಾಮ ಮಂದಿರ ವಿರುದ್ಧ ಟೀಕೆ ಮಾಡಿದರು. ಆದರೆ ಅವರೇ ಹೆಚ್ಚು ರಾಮನ ಪೂಜೆ ಮಾಡ್ತಾರೆ ಎಂದಿದ್ದ ಮಾಜಿ ಪ್ರಧಾನಿ ದೇವೇಗೌಡರಿಗೆ ತಿರುಗೇಟು ನೀಡಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಮನ ಹೆಸರೇಳ್ಳೋದು ಕೇವಲ ಓಟಿಗೋಸ್ಕರ ಎಂದು ಸಚಿವರು ವಾಗ್ಧಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next