Advertisement

ಹಣ ಪಡೆಯದೆ ಪಡಿತರ ನೀಡಬೇಕು: ನ್ಯಾಯ ಬೆಲೆ ಅಂಗಡಿಗಳಿಗೆ ಎಚ್ಚರ ನೀಡಿದ ಸಚಿವ ಕೆ ಗೋಪಾಲಯ್ಯ

03:38 PM Apr 10, 2020 | keerthan |

ಬೆಂಗಳೂರು; ಪಡಿತರ ಕೊಡುವಾಗ ಜನರ ಬಳಿ ಯಾವುದೇ ಕಾರಣಕ್ಕೂ ಹಣ ಪಡೆಯಬಾರದು ಹಾಗೂ ಅವರಿಗೆ ಸರಿಯಾಗಿ ರೇಷನ್ ವಿತರಣೆ ಮಾಡಬೇಕು. ಒಂದು ವೇಳೆ ನಿಮ್ಮ ಮೇಲೆ ಆರೋಪ ಕೇಳಿಬಂದರೆ ನಿಮ್ಮ ಲೈಸನ್ಸ್ ರದ್ದು ಮಾಡಬೇಕಾಗುತ್ತೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಶ್ರೀ ಕೆ ಗೋಪಾಲಯ್ಯ ಖಡಕ್ ಎಚ್ಚರಿಕೆ ನೀಡಿದರು.

Advertisement

ಇಂದು ಬೆಳಗ್ಗೆ ನಗರದ ಕೆಲವು ನ್ಯಾಯ ಬೆಲೆ ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿದರು. ಪೀಣ್ಯ, ಸುಂಕದ ಕಟ್ಟೆ, ಹೆಗ್ಗನಹಳ್ಳಿಲಿರುವ ಇರುವ ಎಲ್ಲಾ ನ್ಯಾಯ ಬೆಲೆ ಅಂಗಡಿಗಳಿಗೆ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಬಯೋಮೆಟ್ರಿಕ್ ಉಪಯೋಗಿಸದಂತೆ ರೇಷನ್ ಕಾರ್ಡ್ ಗಳನ್ನ ನೋಡಿ ರೇಷನ್ ವಿತರಣೆ ಮಾಡಿ ಎಂದು ಸೂಚನೆ ನೀಡಿದರು.
ಜನರ ಬಳಿ ಸಮಸ್ಯೆಗಳ ಆಲಿಸಿದ ಸಚಿವ ಶ್ರೀ ಕೆ ಗೋಪಾಲಯ್ಯ ಅವರು, ಮುಕ್ತವಾಗಿ ನಿಮ್ಮ ಸಮಸ್ಯೆಗಳನ್ನ ನಮ್ಮ ಬಳಿ ಹೇಳಿಕೊಳ್ಳಿ. ನಿಮಗೆ ಯಾವುದೇ ರೀತಿಯ ತೊಂದರೆಗಳಾಗದಂತೆ ನೋಡಿಕೊಳ್ಳುತ್ತೇವೆ ಎಂದು ಜನರಿಗೆ ಧೈರ್ಯ ತುಂಬಿದರು.

ಇವಾಗ ಜನರಿಗೆ ನಮ್ಮ ಸರ್ಕಾರದಿಂದ ಒಂದು ತಿಂಗಳಿಗೆ 5 ರಿಂದ 10 ಕೆ.ಜಿ ಅಕ್ಕಿ‌, ಒಂದು ಕುಟುಂಬಕ್ಕೆ ‌ಒಂದು ಕಾರ್ಡ್ ಗೆ ಎರಡು ಕೆಜಿ ಗೋಧಿ ಕೊಡ್ತೀವಿ‌. ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರದ ಪಡಿತರ ಬರುತ್ತದೆ. ಆಗ 10 ಕೆ ಜಿ ಅಕ್ಕಿ ಒಂದು ಕೆಜಿ ಬೇಳೆ ಕೊಡುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next