Advertisement

ಗೃಹಲಕ್ಷ್ಮಿ ಕೊಟ್ಟಿದ್ದಕ್ಕೆ ಹೆಬ್ಬಾಳ್ಕರ್‌ ಗಲ್ಲ ಸವರಿ ನನ್ನವ್ವ ಬಂಗಾರಿ ಎಂದ ವೃದ್ಧೆ!

07:39 PM Mar 03, 2024 | Team Udayavani |

ಬೆಳಗಾವಿ: ಗೃಹಲಕ್ಷ್ಮಿ ಯೋಜನೆಯ 2 ಸಾವಿರ ರೂ.ಯಿಂದ ಮನೆ ಮಂದಿಯೆಲ್ಲ ಹೊಟ್ಟೆ ತುಂಬ ಊಟ ಮಾಡುತ್ತಿದ್ದೇವೆ. ಬಹಳ ಅನುಕೂಲ ಆಗಿದೆ ಎಂದು ವೃದ್ಧೆಯೋರ್ವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಗಲ್ಲ ಸವರಿ, “ನನ್ನವ್ವ ಬಂಗಾರಿ, ಚಿನ್ನ’ ಎಂದು ಆಶೀರ್ವದಿಸಿದರು.

Advertisement

ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ತೆರಳುವಾಗ ಮನೆ ಎದುರು ನಿಂತಿದ್ದ ವೃದ್ಧೆಯನ್ನು ಮಾತನಾಡಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, “ಗೃಹಲಕ್ಷ್ಮಿ ಯೋಜನೆಯ 2 ಸಾವಿರ ರೂ. ಬರುತ್ತಿದೆಯೇ, ಬಂದ ಹಣವನ್ನು ಏನು ಮಾಡುತ್ತಿದ್ದೀರಿ’ ಎಂದು ವೃದ್ಧೆಯ ಹೆಗಲ ಮೇಲೆ ಕೈ ಇಟ್ಟು ಸಲುಗೆಯಿಂದಲೇ ಪ್ರಶ್ನಿಸಿದಾಗ ವೃದ್ಧೆ ಮೇಲಿನಂತೆ ಉತ್ತರಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next