Advertisement

ದಸರಾ ಮ್ಯಾರಥಾನ್‌ ಓಟ; ಮುಗ್ಗರಿಸಿ ಬಿದ್ದ ಸಚಿವ ಜಿಟಿಡಿ

11:00 AM Oct 14, 2018 | Team Udayavani |

ಮೈಸೂರು: ದಸರಾ ಸಂಭ್ರಮದ ವೇಳೆ ಆಯೋಜಿಸಲಾಗಿದ್ದ  ಮ್ಯಾರಥಾನ್‌ ಓಟದ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ನಡುರಸ್ತೆಯಲ್ಲೇ ಮುಗ್ಗರಿಸಿ ಬಿದ್ದ ಘಟನೆ ನಡೆದಿದೆ. ಅದೃಷ್ಟವಷಾತ್‌ ಅವರಿಗೆ ಯಾವುದೇ ಗಾಯಗಳಾಗಿಲ್ಲ. 

Advertisement

ಭಾನುವಾರ ಓವಲ್‌ ಮೈದಾನದಲ್ಲಿ  ಕ್ರೀಡಾ ಇಲಾಖೆ ಆಯೋಜಿಸಿದ್ದ ಮ್ಯಾರಥಾನ್‌ನಲ್ಲಿ  ಯುವಕನಂತೆ ಉತ್ಸಾಹದಲ್ಲಿ ಪಾಲ್ಗೊಂಡ ಸಚಿವ ಜಿಟಿಡಿ ಪಂಚೆ  ಎತ್ತಿಕಟ್ಟಿ ಓಡಲು ಆರಂಭಿಸಿದರು. 

ಪಂಚೆ ಕಾಲಿಗೆ ಅಡ್ಡಬಂದಂತಾಗಿ ಬಿದ್ದಿದ್ದಾರೆ, ಕೂಡಲೆ ಪಕ್ಕದಲ್ಲಿದ್ದ ಕ್ಯಾಮರಾಮೆನ್‌ಗಳು, ಮ್ಯಾರಥಾನ್‌ ಸ್ಫರ್ಧಿಗಳು ಸಚಿವರ ನೆರವಿಗೆ ಬಂದು ಮೇಲಕ್ಕೆತ್ತಿದರು.

Advertisement

Udayavani is now on Telegram. Click here to join our channel and stay updated with the latest news.

Next