Advertisement

ಸಿದ್ದರಾಮಯ್ಯ ಹಿಂಬಾಲಕರಿಗೆ ಸಚಿವ ಸ್ಥಾನ: ಶಾಮನೂರು

09:37 AM Dec 25, 2018 | Harsha Rao |

ದಾವಣಗೆರೆ: ಸಿದ್ದರಾಮಯ್ಯನವರ ಬೆಂಬಲಿಗರಿಗೆ ಸಚಿವ ಸ್ಥಾನ ನೀಡಲಾಗಿದೆ. ನಾನು ಇರುವ ಸತ್ಯವನ್ನೇ
ಹೇಳಿದ್ದೇನೆ. ಅದನ್ನು ಎಷ್ಟು ಸಲ ಬೇಕಾದರೂ ಹೇಳುತ್ತೇನೆ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಬೇಜಾರೇನೂ ಇಲ್ಲ. ಮಿನಿಸ್ಟ್ರೆ ಸ್ಥಾನದ ಅಪ್ಪನಗಿಂತಲೂ ಚೆನ್ನಾಗಿ ಕೆಲಸ ಮಾಡಿಸುತ್ತಿದ್ದೇನೆ ಎಂದರು.  ಹಿರಿಯ ಸಚಿವರಾದ ದೇಶಪಾಂಡೆ ಮುಂತಾದವರನ್ನು ಮುಂದುವರಿಸಲಾಗಿದೆ ಯೆಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಹಿಂದಿದ್ದವರನ್ನೇ ಮುಂದುವರಿಸಿದ್ದಾರೆ. 2 ವರ್ಷ ನಂತರ ಬದಲಾವಣೆ ಮಾಡುತ್ತೇವೆ ಅಂದಿದ್ದರು. ಈಗಿನ್ನೂ 6-7 ತಿಂಗಳಾಗಿದೆ. ಮುಂದೆ ನೋಡೋಣ ಎಂದರು.

ಎಲ್ಲಿಯೋ ಒಂದು ಕಡೆ ವೀರಶೈವರನ್ನು ಕಡೆಗಣಿಸಲಾಗುತ್ತಿದೆಯೇ…ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವೀರಶೈವರನ್ನು ಕಡೆಗಣಿಸಿದ್ದಕ್ಕೆ ಅನುಭವಿಸಿದರಲ್ಲ. 60 ಸಾವಿರ ವೋಟ್‌ನಲ್ಲಿ ಸೋತರಲ್ಲ. ಡಿಪಾಸಿಟ್‌
ಕಳೆದುಕೊಂಡು ಬಂದರಲ್ಲ ಅವರಿಗೆ ಗೊತ್ತಾಗಬೇಕು ಎಂದರು.

ವೀರಶೈವರನ್ನು ಕಡೆಗಣಿಸಿದರಿಂದ ಲೋಕಸಭಾ ಚುನಾವಣೆಗೆ ಏನಾದರೂ ಎಫೆಕ್ಟ್ ಆಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಅವರು (ಹೈಕಮಾಂಡ್‌) ಯೋಚನೆ ಮಾಡಬೇಕು. ಅದನ್ನ ನಾವಲ್ಲ ಯೋಚನೆ ಮಾಡೋದು ಎಂದು
ಹೇಳಿದರು.

ರಾಹುಲ್‌ಗೆ ದೂರು ನೀಡುವಿರಾ?: ನಾವು ಅಲ್ಲಿ ತನಕ ಯೋಚನೆ ಮಾಡಿಲ್ಲ. ಇಲ್ಲಿಯೇ ಯೋಚನೆ ಮಾಡುತ್ತೇವೆ. ಅವರೇ(ರಾಹುಲ್‌ ಗಾಂಧಿ) ನಮ್ಮ ಹತ್ತಿರ ಬರಬೇಕು. ನಾವ್ಯಾಕೆ ಹೋಗಬೇಕು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next