Advertisement
ಕೊನೆ ಭಾಗದ ರೈತರ ಸಮಸ್ಯೆಗೆ ಶೀಘ್ರದಲ್ಲೇ ಶಾಶ್ವತ ಪರಿಹಾರ ಒದಗಿಸುವುದಾಗಿ ತಿಳಿಸಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಭರವಸೆ ನೀಡಿ ತಿಂಗಳಾದರೂ ಸಮಸ್ಯೆ ಮಾತ್ರ ಬಗೆ ಹರಿಯಲಿಲ್ಲ. ಬದಲಿಗೆ ಅಂದು ಅವರು ರೈತರಿಗೆ ನೀಡಿದ ಯಾವೊಂದು ಭರವಸೆಯೂ ಈಡೇರದಿರುವುದು ವಿಪರ್ಯಾಸ. ಈ ಬಾರಿ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದರಿಂದ ರೈತರಲ್ಲಿ ಬೆಳೆಗೆ ನೀರು ಸಿಗುವ ವಿಶ್ವಾಸ ಹೆಚ್ಚಾಗಿತ್ತು. ಅದೇ ಉತ್ಸಾಹದಲ್ಲಿ ನಾಟಿ ಮಾಡಿದ ರೈತರು ನೀರು ಬಿಡುವಂತೆ ಅಂಗಲಾಚಿದರೂ ಕೊನೆ ಭಾಗದ ಕಾಲುವೆಗೆ ಮಾತ್ರ ನೀರು ಹರಿಯಲಿಲ್ಲ.
Related Articles
Advertisement
ನಿರ್ವಹಣೆ ವೈಫಲ್ಯ: ಈಗ ಕಾಲುವೆಗೆ ನೀರು ಹರಿದರೂ ಅದು ಕೊನೆ ಭಾಗ ತಲುಪದಿರವುದಕ್ಕೆ ನಿರ್ವಹಣೆ ವೈಫಲ್ಯವೇ ಕಾರಣ. ಜಿಲ್ಲಾಡಳಿತ 144 ಕಲಂನನ್ವಯ ನಿಷೇಧಾಜ್ಞೆ ಜಾರಿ ಮಾಡಿದ್ದಾಗಿ ಹೇಳುತ್ತಿದೆಯಾದರೂ ಅದರಿಂದ ಪ್ರಯೋಜನವಿಲ್ಲ ಎನ್ನುತ್ತಾರೆ ರೈತರು. ಟಿಎಲ್ಬಿಸಿ ವ್ಯಾಪ್ತಿಗೆಒಟ್ಟಾರೆ 6 ಲಕ್ಷಕ್ಕೂ ಅಧಿಕ ಎಕರೆ ಬಿತ್ತನೆ ಪ್ರದೇಶವಿದೆ. ಆದರೆ, ಅದರಲ್ಲಿ ಈಗ ಸಮರ್ಪಕವಾಗಿ ನೀರು ಸಿಗುತ್ತಿರುವುದು ವಡ್ಡರಹಟ್ಟಿ, ಸಿಂಧನೂರು ಭಾಗದ 1.19 ಲಕ್ಷ ಎಕರೆ ಪ್ರದೇಶಕ್ಕೆ ಮಾತ್ರ ಎಂದು ರೈತ ಮುಖಂಡರು ದೂರುತ್ತಾರೆ. 24ನೇ ಮೈಲ್ನಿಂದ 46ನೇ ಮೈಲ್ನಲ್ಲಿ ನೀರಿನ ದುರ್ಬಳಕೆ ಆಗುತ್ತಿದೆ. ನಿತ್ಯ 1200ರಿಂದ 1500 ಕ್ಯೂಸೆಕ್ ನೀರು ದುರ್ಬಳಕೆ ಆಗುತ್ತಿದೆ. ಅದನ್ನು ತಡೆಗಟ್ಟಿದಲ್ಲಿ ಕೆಳಭಾಗಕ್ಕೆ ಸರಾಗವಾಗಿ ನೀರು ಬರಲಿದೆ. ಅದರ ಜತೆಗೆ ಗೇಜ್ ನಿರ್ವಹಣೆಗೆ ಅಗತ್ಯ ಸಿಬ್ಬಂದಿಯೇ ಇಲ್ಲ. ಈಗ ರೈತರಿಗೆ ನೀರಿನ ಅಗತ್ಯವಿದೆ. ಬೆಳೆ ಉಳಿದು ರೈತರು ನಷ್ಟದಿಂದ ತಪ್ಪಿಸಿಕೊಳ್ಳಬೇಕಾದರೆ ಕನಿಷ್ಠ ಕೆಲ ದಿನಗಳಾದರೂ ನೀರು ಹರಿಸಬೇಕು. ಜಿಲ್ಲಾಡಳಿತ ಇನ್ನಾದರೂ ಕ್ರಮ ಕೈಗೊಳ್ಳಬೇಕಿ¨ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಕಾಟಾಚಾರಕ್ಕೆ ಸಭೆ ನಡೆಸಿದ್ದರು. ಅವರು ಹೇಳಿದಂತೆ ವಾರದೊಳಗೆ 40 ಇಂಜಿನಿಯರ್ ಕೆಲಸಕ್ಕೆ ಹಾಜರಾಗಬೇಕಿತ್ತು. ಆದರೆ, ಇರುವ ಒಬ್ಬ ಅಧಿಕಾರಿಯನ್ನೇ ವರ್ಗಾಯಿಸಿದ್ದಾರೆ. 24ರಿಂದ 46ನೇ ಮೈಲ್ನಲ್ಲಿ ಆಗುತ್ತಿರುವ ನೀರಿನ ದುರ್ಬಳಕೆ ತಡೆದರೆ ಕೊನೆ ಭಾಗಕ್ಕೆ ನೀರು ಸಿಗಲಿದೆ. ನಿಷೇಧಾಜ್ಞೆ ಬದಲಿಗೆ ಜಿಲ್ಲಾಡಳಿತ ಸಿಆರ್ಪಿಎಫ್, ಬಿಎಸ್ಎಫ್ನಂಥ ವಿಶೇಷ ಫೋರ್ಸ್ ಬಳಸಿ ನೀರು ಹರಿಸಲಿ.
ಡಿ.ವೀರನಗೌಡ, ಪ್ರಾಂತ ರೈತ ಸಂಘದ ಮುಖಂಡ. ಸಿದ್ದಯ್ಯಸ್ವಾಮಿ ಕುಕನೂರ