Advertisement

ವಿಮಾನದಲ್ಲಿ ಸ್ಯಾಂಡ್‌ವಿಚ್‌ ಸೇವಿಸಿದ ಸಚಿವ ಡಿಕೆಶಿಗೆ ವಾಂತಿ,ಅಸ್ವಸ್ಥ

03:22 PM Sep 18, 2018 | Team Udayavani |

ಕನಕಪುರ: ಸಚಿವ ಡಿ.ಕೆ.ಶಿವಕುಮಾರ್‌ ಅವರು ತೀವ್ರ ವಾಂತಿಯಿಂದ ಕಂಗಾಲಾದ ಘಟನೆ ಸೋಮವಾರ ರಾತ್ರಿ ನಡೆದಿದ್ದು,ಇಂದು ನಿವಾಸದಲ್ಲೇ ವಿಶ್ರಾಂತಿ ಪಡೆಯುತ್ತಾ ಚಿಕಿತ್ಸೆ ಪಡೆಯುತ್ತಿದ್ದಾರೆ. 

Advertisement

 ರಾಯಚೂರು ಪ್ರವಾಸದಲ್ಲಿದ್ದ ಸಚಿವ ಡಿಕೆಶಿ ಅವರು ಹೈದರಾಬಾದ್‌ನಿಂದ ವಿಮಾನದಲ್ಲಿ ವಾಪಾಸಾಗುವ ವೇಳೆ ಸ್ಯಾಂಡ್‌ವಿಚ್‌ ಸೇವಿಸಿದ್ದಾರೆ. 

ವಿಮಾನದಿಂದ ಇಳಿಯುತ್ತಿದ್ದಂತೆ ನಿರಂತರವಾಗಿ ವಾಂತಿಯಾಗಿದೆ. ಕೂಡಲೇ ಕಗ್ಗಲಿಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.  

ಇದೀಗ ಕನಕಪುರದ ಮನೆಯಲ್ಲಿ  ಡಿಕೆಶಿ ಅವರು ಚೇತರಿಸಿಕೊಳ್ಳುತ್ತಿದ್ದು, ವೈದ್ಯರು ಅವರಿಗೆ ಚಿಕಿತ್ಸೆ ನೀಡಿದ್ದಾರೆ.

ತೆರಿಗೆ ವಂಚನೆ ಮತ್ತು ಹವಾಲಾ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ದೂರು ದಾಖಲಿಸಿದ್ದು, ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಬಂಧಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next