Advertisement

ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ವರ್ಗಾವಣೆ ಬಾಂಬ್ ಸಿಡಿಸಿದ ಸಚಿವ ಚೆಲುವರಾಯಸ್ವಾಮಿ

05:38 PM Jul 08, 2023 | Team Udayavani |

ಚಿಕ್ಕಮಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸಚಿವ ಚೆಲುವರಾಯಸ್ವಾಮಿ ಬಾಂಬ್ ಸಿಡಿಸಿದ್ದು, ಚಂದ್ರೇಗೌಡ ಎಂಬುವರನ್ನ 7 ಬಾರಿ ವರ್ಗಾವಣೆ ಮಾಡಿದ್ದರು. ಮೂಡಾ ಕಮಿಷನರ್ ಆಗಿದ್ದ ನಾಗರಾಜ್ ಎಂಬುವರನ್ನ ತಪ್ಪಿಲ್ಲದಿದ್ದರೂ ಅಮಾನತು ಮಾಡಿದ್ದರು. ಇಬ್ಬರೂ ಮಂಡ್ಯದ ಒಕ್ಕಲಿಗ ಸಮುದಾಯದವರು. ಒಕ್ಕಲಿಗ ಎನ್ನುವ ಕಾರಣಕ್ಕೆ ಚೆಲುವರಾಯಸ್ವಾಮಿ ವಿರುದ್ಧ ನಿಂತಿರುವುದು. ಅವರಿಗೆ ಒಕ್ಕಲಿಗರಿಗೆ ಹೆಚ್ಚು ಅವಕಾಶ ಸಿಗಬಾರದು ಎನ್ನವುದಿದೆ ಎಂದರು.

Advertisement

ನನಗೆ ಯಾವುದೇ ಬೇಜಾರಿಲ್ಲ, ಇನ್ನು 10 ಸಲ ಸಿಎಂ ಆದರೂ ಸ್ವಾಗತಿಸುತ್ತೇವೆ. ಆ ಕುಟುಂಬಕ್ಕೆ ಯಾವತ್ತೂ ಯಾವುದೇ ರೀತಿ ಕೆಟ್ಟದಾಗಿ ನಡೆದುಕೊಂಡಿಲ್ಲ, ಮಾತಾಡಿಲ್ಲ. ಅವರಿಗೆ ನಮ್ಮನ್ನು ಸಹಿಸುವ ಶಕ್ತಿ ಇಲ್ಲ, ದೇವರು ಎಲ್ಲರನ್ನೂ ಸಹಿಸುವ ಶಕ್ತಿ ನೀಡಲಿ ಎಂದು ಚೆಲುವರಾಯಸ್ವಾಮಿ ಹೇಳಿದರು.

ಅವರ ಪೆನ್ ಡ್ರೈವ್ ನಡೆ ಹೊಸದಲ್ಲ, ಎಲ್ಲರೂ ನೋಡಿದ್ದಾರೆ. ಅವರಿಗೆ ಎಲ್ಲರ ಬಗ್ಗೆಯೂ ಗೊತ್ತು ಎನ್ನುತ್ತಾರೆ. ಮಾತೆತ್ತಿದರೆ ಎಲ್ಲರ ರಾಜೀನಾಮೆ ಕೇಳುತ್ತಾರೆ. ಯಾರು ಪೆನ್‌ ಡ್ರೈವ್ ಇದೆ ಎನ್ನುತ್ತಾರೆ, ಅವರೇ ಹೇಳಬೇಕಲ್ವಾ? ಪೆನ್ ಡ್ರೈವ್ ಇದ್ದರೆ ಯಾಕೆ ಇಟ್ಟುಕೊಂಡಿದ್ದಾರೆ ಎನ್ನುವುದು ಅವರಿಗೆ ಬಿಟ್ಟದ್ದು ಎಂದರು.

ಹತ್ತಾರು ವರ್ಷದಿಂದ ನೋಡಿದ್ದೇವೆ, ಎಲ್ಲರನ್ನೂ ಬೆದರಿಸುವುದು, ಹುಷಾರ್ ಎನ್ನವುದು ಸಹಜ. ಅವರ ಈ ಪೆನ್ ಡ್ರೈವ್ ನಡೆ ಹೊಸದೇನಲ್ಲ. ಅದನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕು, ಉದಾಸೀನ ಮಾಡಬೇಕು, ಕೌಂಟರ್ ಕೊಡಬೇಕಾ ಗೊತ್ತಾಗ್ತಿಲ್ಲ ಎಂದು ಕೃಷಿ‌ ಸಚಿವ ಚೆಲುವರಾಯಸ್ವಾಮಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next