Advertisement

ಕೆಲವರ ಮಾತಿನಿಂದ ಸಿಎಂ ಮನನೊಂದು ರಾಜೀನಾಮೆ ಹೇಳಿಕೆ ಕೊಟ್ಟಿರಬಹುದು: ಭೈರತಿ ಬಸವರಾಜು

11:38 AM Jun 07, 2021 | Team Udayavani |

ಬೆಂಗಳೂರು: ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸಿಎಂ ಬಗ್ಗೆ ಕೆಲವರು ಏನೇನೋ ಮಾತಾಡ್ತಿದಾರೆ. ಇದರಿಂದ ಸಿಎಂ ಮನನೊಂದು ಅಂಥ ಹೇಳಿಕೆ ಕೊಟ್ಟಿರಬಹುದು. ಯಡಿಯೂರಪ್ಪ ರನ್ನು ಬದಲಾಯಿಸುವ ಪ್ರಸ್ತಾಪ ಹೈಕಮಾಂಡ್ ಮುಂದೆ ಇಲ್ಲ ಎಂದು ಸಚಿವ ಭೈರತಿ ಬಸವರಾಜು ಹೇಳಿದರು.

Advertisement

ಸಿಎಂ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು,  ಯಾವುದೇ ಕಾರಣಕ್ಕೂ ಸಿಎಂ  ಬದಲಾವಣೆ ಆಗಲ್ಲ. ಯಡಿಯೂರಪ್ಪ ನವರೇ ಉಳಿದ ಅವಧಿಗೆ ಸಿಎಂ ಆಗಿರುತ್ತಾರೆ. ನಾವೆಲ್ಲ ಸಿಎಂ ಜೊತೆಗೆ ಇದ್ದೇವೆ. ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದರು.

ಇದನ್ನೂ ಓದಿ: Covid ಪ್ರಕರಣ ಇಳಿಕೆ:ಜೂ.7ರಿಂದ ದೆಹಲಿ, ಮುಂಬೈ, ತಮಿಳುನಾಡಿನಲ್ಲಿ ಲಾಕ್ ಡೌನ್ ಸಡಿಲಿಕೆ ಶುರು

ಸಿಎಂ ವಿರುದ್ಧ ವಿರೋಧಿ ಹೇಳಿಕೆ ಕೊಡುತ್ತಿರುವವರ ಬಗ್ಗೆ ನಾನು ಏನೂ ಮಾತಾಡಲ್ಲ. ಕೆಲವೇ ದಿನಗಳಲ್ಲಿ ನಮ್ಮ ಉಸ್ತುವಾರಿ ಅರುಣ್ ಸಿಂಗ್ ಬರ್ತಾರೆ. ಅರುಣ್ ಸಿಂಗ್ ಎಲ್ಲರ ಜತೆ ಚರ್ಚೆ ಮಾಡ್ತಾರೆ ಹೈಕಮಾಂಡ್ ಗೆ ಯಡಿಯೂರಪ್ಪನವರ ಮೇಲೆ ನಂಬಿಕೆ ಇದೆ. ಹಾಗಾಗಿಯೇ ಹೈಕಮಾಂಡ್ ‌ಮೌನವಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ವಿಚಾರವಾಗಿ ಈಗಾಗಲೇ ಪ್ರಹ್ಲಾದ್ ಜೋಷಿ, ಕಟೀಲ್ ಸ್ಪಷ್ಟಪಡಿಸಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next