Advertisement

ಬೆಳೆ ಹಾನಿ ವೀಕ್ಷಿಸಿದ ಸಚಿವ ಅಶೋಕ್‌

03:51 PM Jan 12, 2021 | Team Udayavani |

ಹಿರಿಯೂರು: ತಾಲೂಕಿನಲ್ಲಿ ಕಳೆದ ವಾರ ಬಿದ್ದ ಅಕಾಲಿಕ ಮಳೆಯಿಂದ ರೈತರ ಬೆಳೆ ಹಾಳಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಕಂದಾಯ ಸಚಿವ ಆರ್‌. ಅಶೋಕ್‌ ತಾಲೂಕಿನ ಬಬ್ಬೂರು ಗ್ರಾಮದ ಕಾಂತರಾಜ್‌ ಮತ್ತು ನಿರಂಜನ್‌ ಮತ್ತು ಐಮಂಗಲ ಹೋಬಳಿ ತಾಳವಟ್ಟಿ ಗ್ರಾಮದ ತೈತರ ಜಮೀನಿಗೆ ಭೇಟಿ ನೀಡಿ ಬೆಳೆ ಹಾನಿ ವೀಕ್ಷಣೆ ಮಾಡಿದರು.

Advertisement

ಕಾಂತರಾಜ್‌ರವರ 9 ಎಕರೆ ಹಾಗೂ ನಿರಂಜನ್‌ ರವರ 3 ಎಕರೆಯಲ್ಲಿನ ಕಡಲೆ ಬೆಳೆ ಜಲಾವೃತಗೊಂಡು ಸಂಪೂರ್ಣ ಹಾಳಾಗಿರುವದನ್ನು ವೀಕ್ಷಿಸಿದ ಸಚಿವರು, ಬೆಳೆ ಹಾನಿಯಾಗಿರುವ ಕುರಿತು ಸಮಗ್ರ ವರದಿ ಕಳುಹಿಸುವಂತೆ ಕೃಷಿ ಇಲಾಖೆ ಅಧಿಕಾರಿಗೆ ಸೂಚಿಸಿದರು.

ಇದನ್ನೂ ಓದಿ:ಭಕ್ತರೊಂದಿಗೆ ಮಂತ್ರಾಲಯಕ್ಕೆ ಪಾದಯಾತ್ರೆ ಹೊರಟ ಶ್ವಾನ

ಈರುಳ್ಳಿ ನಷ್ಟವಾಗಿದೆಯಂದು ಕಡಲೆ ಬೆಳೆ ಹಾಕಿದೆವು. ಆದರೆ ಇದು ನಷ್ಟ ಉಂಟಾಗಿ ಬೀದಿಗಿ ಬಂದಿದ್ದೇವೆ. ನಮಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವಂತೆ ರೈತರು ಸಚಿವರಲ್ಲಿ ಮನವಿ ಮಾಡಿದರು. ಚಿತ್ರದುರ್ಗ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು, ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ, ತಹಶೀಲ್ದಾರ್‌ ಜಿ.ಎಚ್‌. ಸತ್ಯನಾರಾಯಣ, ತಾಪಂ ಇಒ ಹನುಮಂತಪ್ಪ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next