Advertisement

ದಲಿತರ ಮನೆಯಲ್ಲಿ ಸಚಿವ ಉಪಹಾರ ಸೇವಿಸಿದ ಸಚಿವ ಅಶೋಕ್

10:16 AM Oct 16, 2022 | Team Udayavani |

ರಾಯಚೂರು: ಅರಕೇರಾ ಗ್ರಾಮದಲ್ಲಿ ಕಂದಾಯ ಸಚಿವ ಆರ್.ಅಶೋಕ ಇಂದು ಬೆಳಗ್ಗೆ ದಲಿತ ದೇವಪ್ಪ ಅವರ ಮನೆಯಲ್ಲಿ ಉಪಹಾರ ಸೇವಿಸಿದರು.

Advertisement

ಅರಕೇರಾದ ಬಿಸಿಎಂ ವಸತಿ ನಿಲಯದಲ್ಲಿ ತಂಗಿದ್ದ ಸಚಿವರು, ಬೆಳಗ್ಗೆ ಗ್ರಾಮದಲ್ಲಿ ಸಂಚರಿಸಿ ಜನರೊಂದಿಗೆ ಸಮಾಲೋಚನೆ ನಡೆಸಿದರು. ನಂತರ ದಲಿತರ ಮನೆಗೆ ಭೇಟಿ ನೀಡಿದರು. ಅವರ ಮನೆಯಲ್ಲಿ ರೊಟ್ಟಿ, ಚವಳೆಕಾಯಿ ಪಲ್ಲೆ, ಸೇಂಗಾಪುಡಿ, ಮೊಸರು ಊಟ ಮಾಡಿದರು. ಜತೆ ಮಂಡಕ್ಕಿ ಒಗ್ಗರಣೆ ರುಚಿ ಸವಿದರು.

ದೇವದುರ್ಗದ ಅರಕೇರಾದಲ್ಲಿ ಗ್ರಾಮ ವಾಸ್ತವ್ಯ ನಡೆಸಿದ ಆರ್.ಅಶೋಕ್ ವಿಶೇಷ ಗ್ರಾಮಸಭೆ ನಡೆಸಿ, ಕುಂದು ಕೊರತೆಗಳ ಕುರಿತು ಚರ್ಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next