Advertisement

ಕಿರು ನೀರುಪೂರೈಕೆ ಸ್ಕೀಂ ಅರ್ಧಂಬರ್ಧ: ನಗರಸಭೆ ಅಧಿಕಾರಿಯಿಂದ14.90 ಲಕ್ಷ ರೂ.ಪಾವತಿ

08:53 AM May 23, 2020 | keerthan |

ಗಂಗಾವತಿ: ನಗರ ಸಭೆಯ 2018-19ನೇ ಸಾಲಿನಲ್ಲಿ ಕುಡಿಯುವ ನೀರಿನ‌ ಸಮಸ್ಯೆ ಇರುವ ನಗರದ 20 ವಾರ್ಡಗಳಲ್ಲಿ ಎಸ್ ಎಫ್ ಸಿ ಅನುದಾನದಲ್ಲಿ ಕಿರು ನೀರುಪೂರೈಕೆ ಯೋಜನೆಯಡಿ 22.90 ಲಕ್ಷ ರೂ.ಮಂಜೂರು ಮಾಡಲಾಗಿತ್ತು. ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರ ಅರ್ಧಂಬರ್ಧ ಕಾಮಗಾರಿ ಮಾಡಿ ಹಳೆಯ ನೀರಿನ ‌ಟ್ಯಾಂಕರ್ ಗೆ ಸುಣ್ಣಬಣ್ಣ ಬಳಿದು ಪೈಪ್ ಲೈನ್ ಕಾಮಗಾರಿ ನಡೆಸದೆ ಇದ್ದರೂ,  ಈಗಾಗಲೆ ನಗರಸಭೆಯ ಅಧಿಕಾರಿ ನೆರವಿನೊಂದಿಗೆ 14.90 ಲಕ್ಷ ರೂ.ಗಳನ್ನು ಗುತ್ತೆದಾರನಿಗೆ ಜಮಾ ಮಾಡಲಾಗಿದೆ.

Advertisement

20 ವಾರ್ಡಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಹಣ ಒತ್ತುವರಿ ಮಾಡಲಾಗಿದೆ. ನಗರದ ವಿವಿಧ ವಾರ್ಡಗಳಲ್ಲಿ ನೀರಿನ ಸಮಸ್ಯೆ ಇದ್ದು ಸರಕಾರದ ಹಣ ದುರುಪಯೋಗ ಮಾಡಲಾಗಿದ್ದು ಅಧಿಕಾರಿಗಳ ನಿರ್ಲಕ್ಷ್ಯ ಕಾಣುತ್ತಿದೆ.

ಕುಡಿಯುವ ನೀರಿನ ಯೋಜನೆ ಅರ್ಧಂಬರ್ಧ ಮಾಡಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಇದಕ್ಕೆ ಕುಮ್ಮಕ್ಕು ನೀಡಿದ ಅಧಿಕಾರಿಗಳ ವಿರುದ್ದ ಶಿಸ್ತಿನ ಕ್ರಮ ಜರುಗಿಸುವಂತೆ 29 ವಾರ್ಡಿನ ನಿವಾಸಿಗಳು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next