Advertisement

ಸರಕಾರದಿಂದ ರಾಜ್ಯದಲ್ಲಿ ಮಿನಿ ತಾಲಿಬಾನ್‌ ನಿರ್ಮಾಣ: ಸಿ.ಟಿ. ರವಿ  

06:15 AM Jan 29, 2018 | Team Udayavani |

ಚಿಕ್ಕಮಗಳೂರು: ಅಪರಾಧ ಪ್ರಕರಣಗಳಲ್ಲಿಯೂ ಜಾತಿ ಹುಡುಕುವ ಕೆಲಸ ಮಾಡಿದ ಮೊದಲ ಸರಕಾರವಿದ್ದರೆ ಅದು ರಾಜ್ಯದ ಕಾಂಗ್ರೆಸ್‌ ಸರಕಾರ. ಜಾತ್ಯತೀತತೆಯ ಹೆಸರಿನಲ್ಲಿ ಕಾಂಗ್ರೆಸ್‌ ರಾಜ್ಯದಲ್ಲಿ  ಮಿನಿ ತಾಲಿಬಾನ್‌ ನಿರ್ಮಿಸಲು ಮುಂದಾಗಿದೆಯೇ? ಎಂಬ ಅನುಮಾನ ಕಾಡುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ. ರವಿ ಹೇಳಿದರು.

Advertisement

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರಕಾರ ಕೋಮುಗಲಭೆಗೆ ಕಾರಣರಾದವರ ವಿರುದ್ಧದ ಪ್ರಕ ರಣಗಳನ್ನು ಜಾತಿ ಹೆಸರಿನಲ್ಲಿ ಹಿಂಪಡೆ ದುಕೊಂಡಿದೆ. ಕ್ರೈಮ್‌ಗಳಿಗೆ ಜಾತಿ, ಜನಾಂಗ ಎಂಬುದೆಲ್ಲ ಇರುವುದಿಲ್ಲ. ಈ ರೀತಿ ಪ್ರಕರಣಗಳನ್ನು ವಾಪಸ್‌ ಪಡೆಯುವ ಮೂಲಕ ರಾಜ್ಯದಲ್ಲಿ ಕೋಮು ಗಲಭೆಗಳಿಗೆ ಸರಕಾರವೇ ಕಾರಣವಾಗುತ್ತಿದೆ. ಇಂತಹ ಕೆಲಸ ಗಳನ್ನು ಮಾಡಿಯೇ ದೇಶದಲ್ಲಿ  ಕಾಂಗ್ರೆಸ್‌ ನಿರ್ನಾಮವಾಗುತ್ತಿದೆ. ಕೆಟ್ಟರೂ ಬುದ್ಧಿ ಬಂದಿಲ್ಲ ಎಂಬುದಕ್ಕೆ ಅಲ್ಪಸಂಖ್ಯಾಕರ ಮೇಲಿನ ಪ್ರಕರಣ ಹಿಂಪಡೆದಿರುವುದೇ ನಿದರ್ಶನವಾಗಿದೆ ಎಂದರು.

ದತ್ತ ಪೀಠ ವಿಚಾರದಲ್ಲಿ ನಾಗ ಮೋಹನ್‌ದಾಸ್‌ ಸಮಿತಿ ಸಲ್ಲಿಸಿರುವ ವರದಿಯನ್ನು ಸಚಿವ ಸಂಪುಟಕ್ಕೆ ಸಲ್ಲಿಸಲಾಗಿದೆ ಎಂಬ ಸಚಿವ ರೋಷನ್‌ ಬೇಗ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ರವಿ, ಸಮಿತಿ ರಚಿಸುವ ಮೂಲಕ ರಾಜ್ಯ ಸರಕಾರ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದೆ. 2017 ರಲ್ಲಿ ಮುಜರಾಯಿ ಕಮೀಶನರ್‌ ಸಲ್ಲಿಸಿದ್ದ ವರದಿ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಆದೇಶಿಸಿತ್ತು. ಆದರೆ ಸರಕಾರ ಆ ಕೆಲಸ ಮಾಡದೆ ಸಮಿತಿ ರಚಿಸಿತ್ತು ಎಂದು ದೂರಿದರು.

ಇತ್ತೀಚೆಗೆ ನಗರದಲ್ಲಿ ಎಡಪಂಥೀಯರು ನಡೆಸಿದ ಕಾರ್ಯಕ್ರಮದಲ್ಲಿ ಕೆಲವರು ನಾಗಮೋಹನ್‌ ದಾಸ್‌ ಸಮಿತಿಯ ವರದಿಯನ್ನು ಸರಕಾರ ಕೂಡಲೆ ಅನುಷ್ಠಾನಕ್ಕೆ ತರಬೇಕೆಂಬ ಹೇಳಿಕೆ ನೀಡಿದ್ದಾರೆ. ಸಮಿತಿಯು ಸಲ್ಲಿಸಿದ ವರದಿಯಲ್ಲಿ ಏನಿದೆ ಎಂಬುದು ಅವರಿಗೆ ತಿಳಿದಿದೆ ಎಂಬ ಅನುಮಾನ ಈ ಹೇಳಿಕೆಯಿಂದ ದೃಢವಾಗುತ್ತದೆ ಎಂದರು.

ಅವರ ಹೇಳಿಕೆಯನ್ನು ಗಮನಿಸಿದರೆ ಸರಕಾರ ಮತ್ತು ಎಡಪಂಥೀಯರು ಸೇರಿಕೊಂಡೆ ಸಮಿತಿಯಿಂದ ಹಿಂದೂ ವಿರೋಧಿ ವರದಿ ಸಿದ್ಧಪಡಿಸಿದ್ದಾರೆ ಎಂಬುದು ಖಚಿತವಾಗುತ್ತದೆ ಎಂದರು. ಸಿದ್ದರಾಮಯ್ಯ ಅವರ  ಒಡ್ಡೋಲಗದ ಸಾಹಿತಿ ಪ್ರೊ| ಭಗವಾನ್‌ ಪದೇ ಪದೆ ರಾಮ, ಕೃಷ್ಣರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದರೂ ಅವರ ವಿರುದ್ಧ ಈವರೆಗೂ ಒಂದು ಪ್ರಕರಣ ವನ್ನೂ ಸರಕಾರ ದಾಖಲಿಸಿಲ್ಲ ಎಂದು ದೂರಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next