Advertisement

ನೀ ಇಲ್ಲದೇ ಮನ ಹಗುರಾಗಿದೆ

08:23 PM Feb 03, 2020 | mahesh |

ಕಾಲವೆಂಬುದು ಯಾರಿಗೂ, ಎಂದಿಗೂ ಕಾಯುವುದಿಲ್ಲ ಕಣೋ. ನನಗೆ ಗೊತ್ತು; ನಿನ್ನ ಜೀವನದಲ್ಲಿ ನಾನೂ ಏನೂ ಅಲ್ಲವೆಂದು, ಆದರೆ ಒಂದು ಕಾಲದಲ್ಲಿ ನಿನಗೆ ನಾನೇ ಎಲ್ಲಾ ಎಂಬಾಂತೆ ಇದ್ದೆ. ಕಾಲದೊಂದಿಗೆ ಎಲ್ಲಾರೂ ಬದಲಾಗುತ್ತಾರೆ ಎಂಬ ಪಾಠವನ್ನು ನಿನ್ನಿಂದ ಕಲಿತ್ತಿರುವೆ. ನಿನ್ನ ಮಾಯಾಜಾಲದ ಪ್ರೀತಿಯನ್ನು ನಂಬಿ ತುಂಬಾ ದೂರದವರೆಗೆ ನಿನ್ನೊಂದಿಗೆ ಬಂದರೂ ನಡುನೀರಿನಲ್ಲಿ ಕೈಬಿಟ್ಟವನು ನೀನು ಎಂಬುದನ್ನು ನೆನಪಿನಲ್ಲಿಟ್ಟುಕೋ. ನಿನ್ನ ನೆನಪುಗಳಿಗೆ ತಿಲಾಂಜಲಿ ಇಡಲು ಪ್ರಯತ್ನಿಸುತ್ತಿರುವೆ.

Advertisement

ನನ್ನ ಬದುಕಲ್ಲಿ ಬಿರುಗಾಳಿಯಂತೆ ಬಂದು, ಪ್ರೀತಿಪ್ರೇಮದ ಮಾತುಗಳನ್ನು ಆಡಿ, ಇಲ್ಲದ ಸಲ್ಲದ ಆಸೆಗಳನ್ನು ಮನದಲ್ಲಿ ಬಿತ್ತಿದೆ. ನಾನೋ ಕನಸಿನ ರಾಜಕುಮಾರ ಸಿಕ್ಕಿದನೆಂದು ಗರ್ವದಿಂದ ಬೀಗತೊಡಗಿದೆ. ದೇವರು ನನ್ನ ಪಾಲಿಗೆ ಎಲ್ಲವನ್ನೂ ಕರುಣಿಸಿದ ಎಂದು ಸಂತೋಷವೂ ಇತ್ತು. ಅದರೆ ನೀನು ನನ್ನಿಂದ ಮರೆಯಾಗಬಹುದು ಎಂಬಾ ಸಣ್ಣ ಕಲ್ಪನೆಯೂ ಇರಲಿಲ್ಲ. ಅದು ಯಾಕೆ ನಿನ್ನ ಮನಸ್ಸು ಈ ರೀತಿ ಬದಲಾಯಿತೆಂಬ ಪ್ರಶ್ನೆಗೆ ಇಂದಿಗೂ ಕೂಡ ಉತ್ತರ ಸಿಗುತ್ತಿಲ್ಲ.

ಅಂದು ನೀ ಆಡಿದ ಮಾತನ್ನು ಇಂದಿಗೂ ಕೂಡ ಮರೆಯಲಾಗುತ್ತಿಲ್ಲ. ನಿನ್ನ ಸಮಯ ಕಳೆಯಲು, ನನ್ನ ಪ್ರೀತಿಯೇ ಬೇಕಿತ್ತ ಎಂಬಾ ಪ್ರಶ್ನೆಯನ್ನು ನಿನ್ನಲ್ಲಿ ಕೇಳ್ಳೋಣವೆಂದರೂ ನಿನಗೆ ಉತ್ತರ ನೀಡಲು ಕೂಡ ಸಮಯವಿಲ್ಲದಷ್ಟಾಗಿದೆ. ನೀನು ಈಗ ಬಹುದೂರ ಸಾಗಿರುವೆ ಎಂಬ ಸತ್ಯ ಗೊತ್ತಿದ್ದರೂ, ಅದನ್ನು ನಂಬಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಯಾಕೆ ಗೊತ್ತ? ನನ್ನ ಜಗತ್ತೇ ನೀನು ಎಂದು ನಂಬಿದ್ದವಳು ನಾನು. ಆದರೆ ನೀನು ಇಲ್ಲದ ಈ ಜೀವನವನ್ನು ಊಹಿಸಲು ಕೂಡ ಅಸಾಧ್ಯವೆಂದು ತಿಳಿದು ದೂರವಾಗದಂತೆ ನಿನ್ನಲ್ಲಿ ಬೇಡಿಕೊಂಡೆ. ಆದರೂ ನಿನ್ನ ಕಲ್ಲು ಮನಸ್ಸು, ಸ್ವಲ್ಪನೂ ಕರಗಲೇ ಇಲ್ಲ. ಮುಗ್ಧ ಹುಡುಗಿಯ ಮನಸ್ಸು ನೋಯಿಸುವೆ ಎಂಬ ಅರಿವೂ ಇಲ್ಲದಂತೆ ನನ್ನ ಕಣ್ಣೀರಿಗೆ ಬೆಲೆ ನೀಡದೇ ಹೋರಟುಹೋದೆ. ನೀನು ಮಾಡಿದ ಈ ಮೋಸಕ್ಕೆ ದಂಡ ಕಟ್ಟಿಸಬೇಕೆಂಬ ಹಠ ನನಲ್ಲಿದೆ. ಆದರೂ ನಿನ್ನನ್ನು ಎಂದು ದೂಷಿಸುವುದಿಲ್ಲ, ಯಾಕೆಂದರೆ ನಿನ್ನನ್ನು ದೂರುವಷ್ಟು ಸಮಯವೂ ಈಗ ನನಗಿಲ್ಲ. ಅದೇನೇ ಇದ್ದರೂ ಕೊನೆಯದಾಗಿ ಒಂದು ಮಾತು ಹೇಳುವೆ; ನೀನಿಲ್ಲದೇ ಮನ ಹಗುರವಾದಂತಿದೆ.

ವಂದನೆಗಳೊಂದಿಗೆ

ಚೈತ್ರಲಕ್ಷ್ಮೀ ಬಾಯಾರು

Advertisement
Advertisement

Udayavani is now on Telegram. Click here to join our channel and stay updated with the latest news.

Next