Advertisement

ಬಂಕ್ ಮಾಲೀಕನಿಗೆ ಲಕ್ಷಾಂತರ ರೂ ಬಾಕಿ: ವ್ಯಕ್ತಿಯನ್ನು ಅರೆಬೆತ್ತಲೆ ಕೂರಿಸಿದ ಬಂಕ್ ಮ್ಯಾನೇಜರ್

05:00 PM Jun 26, 2023 | Team Udayavani |

ಮುದ್ದೇಬಿಹಾಳ: ಡೀಸೆಲ್ ಹಾಕಿಸಿಕೊಂಡ 15 ಲಕ್ಷಕ್ಕೂ ಹೆಚ್ಚು ಬಾಕಿ ಹಣ ಕೊಡಲು ಸತಾಯಿಸಿದ ಕಾರಣ ವ್ಯಕ್ತಿಯೊಬ್ಬನನ್ನು ಪೆಟ್ರೋಲ್ ಬಂಕ್ ನಲ್ಲಿ ಅರೆಬೆತ್ತಲೆಯಾಗಿ ಕೂರಿಸಿದ ಆರೋಪದ ಮೇರೆಗೆ ಇಲ್ಲಿನ ಭೋಸಲೆ ಪೆಟ್ರೋಲ್ ಬಂಕ್ ಮ್ಯಾನೇಜರ್ ಮೇಲೆ ಪ್ರಕರಣ ದಾಖಲಾಗಿದೆ.

Advertisement

ಮೌನೇಶ ಪತ್ತಾರ ಎಂಬಾತ ಬೋರವೆಲ್ ಕೊರೆಯುವ ಯಂತ್ರದ ವಾಹನಕ್ಕೆ ಡೀಸೆಲ್ ಹಾಕಿಸುತ್ತಿದ್ದ‌. ಇತ್ತೀಚೆಗೆ ಬೋರವೆಲ್ ಮಾಲಿಕ ವಾಹನ ಸಮೇತ ತಮ್ಮ ರಾಜ್ಯಕ್ಕೆ ಹೋಗಿದ್ದ. ಈ ವಾಹನಗಳಿಗೆ ಹಾಕಿದ ಡೀಸೆಲ್ ಬಾಕಿ ಲಕ್ಷಾಂತರ ರೂ ಆಗಿತ್ತು. ಡೀಸೆಲ್ ಹಾಕಿಸಲು ಮಧ್ಯವರ್ತಿಯಾಗಿದ್ದ ಮೌನೇಶನಿಗೆ ಬಂಕ್ ಮಾಲಕರು ಬಾಕಿ ಕೊಡಿಸುವಂತೆ ಹಲವು ಬಾರಿ ಕೇಳಿದ್ದರೂ ಸ್ಪಂಧಿಸಿರಲಿಲ್ಲ. ಬೇಸತ್ತು ಮೌನೇಶನನ್ನು ಬಂಕ್ ಗೆ ಕರೆತಂದು ಕೂರಿಸಿದ್ದರು. ಆತ ಏನೇನೊ ನೆಪ ಹೇಳಿ ಬಂಕ್ ನಿಂದ ಓಡಿ ಹೋಗುತ್ತಿದ್ದ. ಇದನ್ನು ಕಂಡು ಬಂಕ್ ನವರು ಮತ್ತೇ ಅವನನ್ನು ಕರೆತಂದು ಅರೆಬೆತ್ತಲೆಯಾಗಿ ಕೂರಿಸಿ ಆತ ಓಡಿ ಹೋಗದಂತೆ ಮಾಡಿದ್ದರು. ಈ ವಿಷಯ ತಿಳಿದ ಆತನ ಪತ್ನಿ, ಮಕ್ಕಳು ಬಂಕ್ ಗೆ ಬಂದು, ಗಲಾಟೆ ನಡೆಸಿ, ಜಿಲ್ಲಾ ಎಸ್ಪಿಗೆ ಮೋಬೈಲ್ ಮೂಲಕ ಮಾತಾಡಿ ದೂರು ಸಲ್ಲಿಸಿದ್ದರು. ಈ ವಿಷಯ ವೈರಲ್ ಅಗುತ್ತಿದ್ದಂತೆಯೇ ತಹಶೀಲ್ದಾರ್, ಸಿಪಿಐ, ಪಿಎಸೈ ಅವರು ಬಂಕ್ ಗೆ ಆಗಮಿಸಿ ವಿಚಾರಣೆ ನಡೆಸಿದರು. ಅರೆಬೆತ್ತಲೆ ಕೂರಿಸಿದ್ದ ಮೌನೇಶನಿಗೆ ಬಟ್ಟೆ ತೊಡಿಸಿ ಪೊಲೀಸ್ ಠಾಣೆಗೆ ಕರೆದೊಯ್ದರು. ಮೌನೇಶನ ಪತ್ನಿ ನೀಡಿರುವ ಅಕ್ರಮ ಬಂಧನ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಭೀಕರ ಪ್ರವಾಹ: ಹೆದ್ದಾರಿಗೆ ಉರುಳಿದ ಬಂಡೆಗಳು, 15 ಕಿ.ಮೀ ಗೂ ಅಧಿಕ ಟ್ರಾಫಿಕ್ ಜಾಮ್

Advertisement

Udayavani is now on Telegram. Click here to join our channel and stay updated with the latest news.

Next