Advertisement

ಲಕ್ಷಾಂತರ ರೂ. ಸಾಮಗ್ರಿ ಬೆಂಕಿಗಾಹುತಿ

10:38 AM Dec 10, 2019 | Team Udayavani |

ಹುಬ್ಬಳ್ಳಿ: ಗೋಕುಲ ರಸ್ತೆಯ ಅಕ್ಷಯ ಸೆಂಟರ್‌ನಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ನಾಗರಾಜ ಛಬ್ಬಿ ಹಾಗೂ ಸುರೇಶ ಶೇಜವಾಡಕರ ಮಾಲೀಕತ್ವದ ಬಹುಮಹಡಿ ಕಟ್ಟಡದಲ್ಲಿ ರವಿವಾರ ನಡುರಾತ್ರಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂ. ಮೌಲ್ಯದ ಉಪಕರಣಗಳು ಸುಟ್ಟು ಹಾನಿಯಾಗಿದೆ.

Advertisement

ಜ್ಯೋತಿ ಎನ್‌. ಛಬ್ಬಿ ಎಂಬುವರಿಗೆ ಸೇರಿದ ಛಬ್ಬಿ ಅಕ್ಷಯ ಕಾರ್ನರ್‌ ಕಟ್ಟಡದಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ ಉಂಟಾಗಿ ಅಂದಾಜು 25-30 ಲಕ್ಷ ರೂ. ಮೌಲ್ಯದ ವಿದ್ಯುತ್‌ ಉಪಕರಣ, ಪೀಠೊಪಕರಣ ಸೇರಿದಂತೆ ಇನ್ನಿತರೆ ಸಾಮಗ್ರಿಗಳು ಸುಟ್ಟು ಹಾನಿಯಾಗಿದೆ. ಬೆಂಕಿಯು ಕಟ್ಟಡದ ತುಂಬೆಲ್ಲ ಆವರಿಸಿದ್ದರಿಂದ ಮೊಬೈಲ್‌ ಶೋರೂಮ್‌, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ವಿವಿಧ ಇಲೆಕ್ಟ್ರಾನಿಕ್ಸ್‌ ಉಪಕರಣಗಳ ಮಳಿಗೆಗಳಿಗೆ ವ್ಯಾಪಿಸಿ ಹಾನಿಯಾಗಿದೆ. ಸ್ಥಳಕ್ಕೆ ಗೋಕುಲ ರಸ್ತೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಡಿಎಫ್‌ಒ ವಿನಾಯಕ ಕಲ್ಲಗುಟ್ಕರ ನೇತೃತ್ವದಲ್ಲಿ ಸಿಬ್ಬಂದಿ ಆಗಮಿಸಿ ಸುಮಾರು ಎರಡು ತಾಸುಗಳ ಕಾಲ ಕಾರ್ಯಾಚರಣೆ ನಡೆಸಿ ಅಗ್ನಿಶಮನಗೊಳಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next