Advertisement

ಕೋಟ್ಯಂತರ ರೂ. ವೆಚ್ಚ ಮಾಡಿದ್ರೂ ಅಭಿವೃದ್ಧಿಯ ಕೊರತೆ

08:35 AM Aug 02, 2017 | Harsha Rao |

ಬೆಂಗಳೂರು: ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ರಾಜ್ಯ ಸರ್ಕಾರ 7 ವರ್ಷಗಳಲ್ಲಿ 21 ಸಾವಿರ ಕೋಟಿ ರೂ. ವೆಚ್ಚ ಮಾಡಿದರೂ ಸಮಗ್ರ ಅಭಿವೃದಿಟಛಿಯಾಗಿಲ್ಲ ಎಂದು ರಾಜ್ಯ ಸಾಂಖೀÂಕ ಹಾಗೂ ಯೋಜನಾ ಸಚಿವ ಎಂ.ಆರ್‌.ಸೀತಾರಾಂ ತಿಳಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ 114 ವಿಧಾನಸಭೆ ಕ್ಷೇತ್ರಗಳನ್ನೊಳಗೊಂಡ ಕರಾವಳಿ ಅಭಿವೃದಿಟಛಿ ಮಂಡಳಿ, ಹೈದರಾಬಾದ್‌ ಕರ್ನಾಟಕ ಅಭಿವೃದಿಟಛಿ ಮಂಡಳಿ, ಬಯಲು ಸೀಮೆ ಅಭಿವೃದಿಟಛಿ ಮಂಡಳಿ ಹಾಗೂ ಮಲೆನಾಡು ಅಭಿವೃದಿಟಛಿ ಮಂಡಳಿಗಳ ಮೂಲಕ ವರ್ಷಕ್ಕೆ 3 ಸಾವಿರ ಕೋಟಿ ರೂ.ನಂತೆ ಏಳು ವರ್ಷಗಳಲ್ಲಿ 21 ಸಾವಿರ ಕೋಟಿ ರೂ. ವೆಚ್ಚವಾಗಿದೆ. ಆದರೆ, ನಿರೀಕ್ಷಿತ ಸಾಧನೆಯಾಗಿಲ್ಲ ಎಂದು ಹೇಳಿದರು.

ಮೇಲ್ನೋಟಕ್ಕೆ ಬಜೆಟ್‌ನ ಅನುದಾನ 18 ಇಲಾಖೆಗಳಿಗೆ ಹಂಚಿಕೆಯಾಗಿರುವುದರಿಂದ ಎಲ್ಲೂ ಪೂರ್ಣಪ್ರಮಾಣದ ಅಭಿವೃದಿಟಛಿಯಾಗಿಲ್ಲ ಎಂಬುದು ಕಂಡು ಬಂದಿದೆ. ಹೀಗಾಗಿ, ಇಲಾಖೆಗಳ ಸಂಖ್ಯೆ 7 ಅಥವಾ 8ಕ್ಕೆ ಇಳಿಸಲು ಚಿಂತನೆ ನಡೆದಿದೆ ಎಂದರು. ಪ್ರಮುಖವಾಗಿ ಗ್ರಾಮೀಣಾಭಿವೃದಿಟಛಿ, ಪಂಚಾಯತ್‌, ಕೃಷಿ, ತೋಟಗಾರಿಕೆ, ಲೋಕೋಪಯೋಗಿ, ಶಿಕ್ಷಣ, ಆರೋಗ್ಯ, ಮೂಲಸೌಕರ್ಯಕ್ಕೆ ಸೀಮಿತಗೊಳಿಸಿ ನಿಯಮಾವಳಿ ರೂಪಿಸಲು ತೀರ್ಮಾನಿಸಲಾಗಿದೆ.
ಈ ಕುರಿತು ಆರ್ಥಿಕ ಇಲಾಖೆ ಅಧಿಕಾರಿಗಳ ಜತೆಯೂ ಚರ್ಚಿಸಿದ್ದು ಮುಖ್ಯಮಂತ್ರಿ ಜತೆಗೂ ಸಮಾಲೋಚನೆ ನಡೆಸಿ ಅಗತ್ಯವಾದರೆ ತಿದ್ದುಪಡಿ ತರಲಾಗುವುದು. ವಿಧಾನಮಂಡಲ ಅಧಿವೇಶನದವರೆಗೆ ಕಾಯಬೇಕೋ ಅಥವಾ ಸಂಪುಟ ಸಭೆಯ ಮುಂದಿಟ್ಟು ತೀರ್ಮಾನ ಕೈಗೊಳ್ಳಬೇಕೋ ಎಂಬುದನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಡಾ.ಡಿ.ಎಂ.ನಂಜುಂಡಪ್ಪ ವರದಿ ಪ್ರಕಾರ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಹಣ ನೋಡಿದರೆ ಪ್ರತಿ ಕ್ಷೇತ್ರಕ್ಕೆ ವರ್ಷಕ್ಕೆ 30 ಕೋಟಿ ರೂ. ವರೆಗೆ ದೊರೆತಿದೆ. ಆದರೆ, ಸ್ಥಳೀಯ ಶಾಸಕರು ಸಹ ಆ ಅನುದಾನದಡಿ ಅಭಿವೃದಿಟಛಿಯೇ ಆಗಿಲ್ಲ. ಎಲ್ಲ ಇಲಾಖೆಗಳಿಗೂ ಹಂಚಿಕೆಯಾಗಿ ಅದು ಯಾವುದಕ್ಕೂ ಸಾಲದಂತಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಾದರೂ ಅಭಿವೃದಿಟಛಿ ಪೂರ್ಣ ಪ್ರಮಾಣದಲ್ಲಿ ಆಗಲು ಅನುದಾನ ಹಂಚಿಕೆಯ ಇಲಾಖೆಗಳನ್ನು ಕಡಿಮೆ ಸಂಖ್ಯೆಗೆ ಇಳಿಸಲಾಗುವುದು ಎಂದು ತಿಳಿಸಿದರು.

ಡಾ.ಡಿ.ಎಂ. ನಂಜುಂಡಪ್ಪ ವರದಿ ಪ್ರಕಾರ ಇದುವರೆಗೂ ಬಿಡುಗಡೆಯಾಗಿರುವ ಮೊತ್ತದಲ್ಲಿ ಆಗಿರುವ ಅಭಿವೃದಿಟಛಿ ಮತ್ತು ಹಿನ್ನಡೆ ಕುರಿತು ಸಮೀಕ್ಷೆ ನಡೆಸಲಾಗುವುದು. ಮುಂದೆ ಬಿಡುಗಡೆಯಾಗುವ ಹಣದ ವೆಚ್ಚದ ಬಗ್ಗೆ ನಿಗಾ ವಹಿಸಲಾಗುವುದು ಎಂದು ಹೇಳಿದರು.

Advertisement

ಶಾಸಕರ ಕ್ಷೇತ್ರಾಭಿವೃದಿಟಛಿ ನಿಧಿಯಡಿ 2017-18 ನೇ ಸಾಲಿನಲ್ಲಿ ತಲಾ 50 ಲಕ್ಷ ರೂ. ನೀಡಿದ್ದು, ಅದು ಸಂಪೂರ್ಣ
ವೆಚ್ಚ ಆದ ನಂತರ ಎರಡನೇ ಕಂತಿನಲ್ಲಿ 1 ಕೋಟಿ ರೂ. ಬಿಡುಗಡೆ ಮಾಡಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 7 ಕೋಟಿ ರೂ., ಶಿವಮೊಗ್ಗದಲ್ಲಿ 1.50 ಕೋಟಿ ರೂ. ಹಿಂದಿನ ಅನುದಾನ ವೆಚ್ಚ ಆಗದೆ ಉಳಿದಿದೆ. 2013-14ನೇ ಸಾಲಿನಲ್ಲೂ ಮುಂಚಿನ 20 ಕೋಟಿ ರೂ. ಅನುದಾನ ಬಳಕೆ ಆಗದೆ ಒಟ್ಟಾರೆ ಉಳಿದಿತ್ತು. ಅದನ್ನು ವೆಚ್ಚ ಮಾಡಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next