Advertisement

 ಟ್ಯಾಂಕರ್‌ ಪಲ್ಟಿ: ಹಾಲಿನ ಹೊಳೆ; ಮುಗಿಬಿದ್ದ ಜನರು 

03:46 PM Dec 19, 2017 | Team Udayavani |

ಚಿಕ್ಕಬಳ್ಳಾಪುರ: ನಗರದ ಹೊರವಲಯದ ವಾಪಸಂದ್ರ ಬಳಿ ಹಾಲಿನ ಟ್ಯಾಂಕರೊಂದು ಪಲ್ಟಿಯಾಗಿ  ಸಾವಿರಾರು ಲೀಟರ್‌ ಹಾಲು ಮಣ್ಣು ಪಾಲಾದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. 

Advertisement

ಸಾದಲಿ ಗ್ರಾಮದ ಹಾಲಿನ ಶೀತಲಿಕರಣ ಘಟಕದಿಂದ  ಯಲಹಂಕ ಕೆಎಂಎಫ್ ಡೈರಿಗೆ ಹಾಲು ತುಂಬಿಕೊಂಡು ಸಾಗುತ್ತಿದ್ದ ಟ್ಯಾಂಕರ್‌ ಚಾಲಕ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. 

ರಸ್ತೆಯ ತುಂಬೆಲ್ಲಾ ಹಾಲು ಹೊಳೆಯಾಗಿ ಹರಿದಿದ್ದು, ಗಮನಿಸಿದ ಜನರು ಸಿಕ್ಕ ಸಿಕ್ಕ ಬಾಟಲಿಗಳಲ್ಲಿ ಲೀಕ್‌ ಆಗುತ್ತಿದ್ದ ಹಾಲನ್ನು ತುಂಬಿಕೊಂಡರೆ , ಇನ್ನು ಕೆಲವರು  ಕೊಡಪಾನಗಳನ್ನು ತಂದು ಹಾಲು ತುಂಬಿಸಿಕೊಂಡರು. 

ಟ್ಯಾಂಕರ್‌ನಲ್ಲಿ ಬಹುಪಾಲು ಹಾಲು ಮಣ್ಣು ಪಾಲಾಗಿದ್ದು, ಕ್ರೇನ್‌ಮೂಲಕ ಟ್ಯಾಂಕರನ್ನು ತೆರವುಗೊಳಿಸಲಾಗಿದೆ. 

ಟ್ಯಾಂಕರ್‌ನಲ್ಲಿದ್ದ ಚಾಲಕ, ಕ್ಲೀನರ್‌ ಮತ್ತು ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next