Advertisement

ಶ್ರೀನಗರ: ಪೊಲೀಸ್‌ ಮೇಲೆ ಉಗ್ರರ ಗುಂಡು, ಠಾಣೆ ಮೇಲೆ ದಾಳಿ

12:20 PM Jul 28, 2017 | Team Udayavani |

ಶ್ರೀನಗರ : ಶೋಪಿಯಾನ್‌ ಜಿಲ್ಲೆಯ ಪೊಲೀಸ್‌ ಠಾಣೆಯೊಂದರ ಮೇಲೆ ಉಗ್ರರು ನಿನ್ನೆ ತಡ ರಾತ್ರಿ ಗುಂಡಿನ ದಾಳಿ ನಡೆಸಿದ್ದಾರೆ; ಕಾಶ್ಮೀರದ ಕುಲಗಾಂವ್‌ ಜಿಲ್ಲೆಯಯಲ್ಲಿ ಓರ್ವ ಪೊಲೀಸ್‌ ಸಿಬಂದಿಯ ಮೇಲೆ ಗುಂಡೆಸೆದು ಆತನನ್ನು ಗಾಯಗೊಳಿಸಿದ್ದಾರೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.

Advertisement

ಕುಲಗಾಂವ್‌ ಜಿಲ್ಲೆಯ ಯಮ್ರಾಕ್‌ ಎಂಬಲ್ಲಿ ತನ್ನ ಮನೆಯಲ್ಲಿದ್ದ ಪೊಲೀಸ್‌ ಸಿಬಂದಿ ಸಲೀಂ ಯೂಸುಫ್ ಎಂಬವರ ಮೇಲೆ ಉಗ್ರರು ಗುಂಡು ಹಾರಿಸಿದರು. ಗಾಯಗೊಂಡ ಸಲೀಂ ಅವರನ್ನು ಒಡನೆಯೇ ಆನಂತ್‌ನಾಗ್‌ನ ಜಿಲ್ಲಾಸ್ಪತ್ರೆಗೆ ಒಯ್ಯಲಾಯಿತು; ಅಲ್ಲಿ ಅವರಿಗೆ ವಿಶೇಷ ಚಿಕಿತ್ಸೆ ಕೊಡಿಸಲಾಯಿತು ಎಂದು ಪೊಲೀಸ್‌ ಮೂಲಗಳು ಹೇಳಿವೆ. 

ಶೋಪಿಯಾನ್‌ ಪೊಲೀಸ್‌ ಠಾಣೆಯ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದಾಗ ಕೂಡಲೇ ಅವರ ಮೇಲೆ ಪ್ರತಿ ದಾಳಿ ನಡೆಸಲಾಯಿತು ಎಂದು ಪೊಲೀಸ್‌ ಮೂಲಗಳು ಹೇಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next