Advertisement

ಪೊಲೀಸರಿಗೆ ಮಾಹಿತಿ ನೀಡ್ತೀಯಾ? ಉಗ್ರರಿಂದ ಯುವಕನ ಬರ್ಬರ ಹತ್ಯೆ 

10:41 AM Jun 18, 2017 | |

ಶ್ರೀನಗರ : ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅರುಭಾಗ್‌ ಎಂಬಲ್ಲಿ ಶನಿವಾರ ರಾತ್ರಿ ಯುವಕನೊಬ್ಬನನ್ನು ಉಗ್ರರು ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದಿದ್ದಾರೆ. 

Advertisement

ಐಜಾಜ್‌ ಅಹಮದ್‌ (27) ಎಂಬ ಯುವಕನನ್ನು  ಮನೆಯ ಎದುರೇ ರಾತ್ರಿ 10.30 ರ ವೇಳೆಗೆ ತೀರ ಹತ್ತಿರದಿಂದ ಗುಂಡಿಕ್ಕಿ ಪರಾರಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಅಹಮದ್‌ನನ್ನು ಆಸ್ಪತ್ರೆಗೆ ಒಯ್ಯಲಾಯಿತಾದರೂ ಚಿಕಿತ್ಸೆಗೆ ಸ್ಪಂಧಿಸದೆ ಕೊನೆಯುಸಿರೆಳೆದಿದ್ದಾನೆ.

ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಎಂಬ ಕಾರಣಕ್ಕೆ ಹತ್ಯೆಗೈಯಲಾಗಿದೆ ಎಂದು ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next