Advertisement

ಉಗ್ರರ ನಂಟು ಶಂಕೆ: ತ್ರಿಶ್ಶೂರ್‌ನಲ್ಲಿ ವ್ಯಕ್ತಿ ವಶಕ್ಕೆ

01:04 AM Aug 25, 2019 | Team Udayavani |

ಕೊಚ್ಚಿ: ಉಗ್ರ ಸಂಘಟನೆಗಳ ಜತೆಗೆ ಸಂಪರ್ಕ ಹೊಂದಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ತ್ರಿಶ್ಶೂರ್‌ ಜಿಲ್ಲೆಯ ಕೊಂಡುಂಗಲ್ಲೂರ್‌ನ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ಆತನನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸುವ ದೃಶ್ಯಾವಳಿಗಳನ್ನು ಮಲಯಾಳಂ ಸುದ್ದಿವಾಹಿನಿಗಳು ಪ್ರಸಾರ ಮಾಡಿವೆ. ಯಾವ ಕಾರಣಕ್ಕಾಗಿ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂಬ ಪತ್ರಕರ್ತರ ಪ್ರಶ್ನೆಗಳಿಗೆ ಪೊಲೀಸರು ಉತ್ತರ ನೀಡಿಲ್ಲ. ಆದರೆ ಆತನ ವಕೀಲರು ನೀಡಿದ ಮಾಹಿತಿ ಪ್ರಕಾರ, 2 ದಿನಗಳ ಹಿಂದೆ ಬಹ್ರೈನ್‌ನಿಂದ ಮಹಿಳೆ ಜತೆಗೆ ಆಗಮಿಸಿದ್ದ. ಪೊಲೀಸರು ಆಕೆಯನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ ಎಂದಿದ್ದಾರೆ.

ತಮಿಳುನಾಡಿಗೆ ಲಷ್ಕರ್‌-ಎ-ತೊಯ್ಬಾ ಉಗ್ರರು ಪ್ರವೇಶ ಮಾಡಿರುವುದಕ್ಕೂ ಆತನಿಗೂ ಯಾವುದೇ ಸಂಬಂಧವಿಲ್ಲ. ಆತನ ಗುರುತಿನ ಚೀಟಿಯನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ವಕೀಲರು ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next