Advertisement

ಉಗ್ರಗಾಮಿ, ಪ್ರತ್ಯೇಕತಾವಾದಿಗಳನ್ನು ದೇಶದಿಂದ ಹೊರಹಾಕಬೇಕು: ಲೆ.ಜ.ರಾಜು

10:07 AM Mar 02, 2020 | sudhir |

ಶ್ರೀನಗರ: ಉಗ್ರಗಾಮಿಗಳು ಮತ್ತು ಪ್ರತ್ಯೇಕತಾವಾದದ ಭಾವನೆಗಳನ್ನು ಬಿತ್ತಿ, ಪೋಷಿಸುವವರನ್ನು ದೇಶದಿಂದ ಹೊರಹಾಕಬೇಕಿದೆ ಎಂದು ಲೆಫ್ಟಿನಂಟ್‌ ಜನರಲ್‌ ಬಗ್ಗವಳ್ಳಿ ಸೋಮಶೇಖರ ರಾಜು ಹೇಳಿದ್ದಾರೆ.

Advertisement

ಲೆ.ಜನರಲ್‌ ಕೆ.ಜೆ.ಎಸ್‌. ಧಿಲ್ಲೋನ್‌ ಅವರಿಂದ 15 ಕಾಪ್ಸ್‌ìನ ಕಮಾಂಡರ್‌ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ರಾಜು, ಉಗ್ರರು ಮತ್ತು ಪ್ರತ್ಯೇಕತಾವಾದಿಗಳು ನಿಯಂತ್ರಣಕ್ಕೆ ಸಿಗುತ್ತಿಲ್ಲ ಎಂಬ ಮಾಹಿತಿ ಇದೆ. ಹೀಗಾಗಿ, ಭಾರತದ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಯುದ್ದಕ್ಕೂ ನಡೆಯುವ ದೇಶ ವಿರೋಧಿಗಳ ಕುಕೃತ್ಯಗಳ ಮೇಲೆ ಹದ್ದಿನ ಕಣ್ಣಿಡಲು ಮತ್ತು ಪ್ರತ್ಯೇಕತಾವಾದದ ಭಾವನೆಗಳನ್ನು ಬಿತ್ತಿ ಬೆಳೆಸುವವರಿಗೆ ಒಂದು ಗತಿ ಕಾಣಿಸಲು ಯುವಕರನ್ನು ಒಳಗೊಂಡ 15 ಕಾಪ್ಸ್‌ì ಪಡೆಯನ್ನು ನಿಯೋಜಿಸಲಾಗಿದೆ. ದೇಶ ಪ್ರತ್ಯೇಕಿಸುವ ಹುನ್ನಾರ ನಡೆಸುವವರಿಗೆ ದೇಶದಿಂದ ಹೊರಹೋಗುವ ದಾರಿ ತೋರಿಸಲಾಗುತ್ತದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next