Advertisement

ಪೈವಳಿಕೆ: ಕಂಬಳದ ಬಂಗಾರದ ಮನುಷ್ಯ ಶ್ರೀನಿವಾಸ ಗೌಡರಿಗೆ ನಾಲ್ಕು ಪದಕ

10:10 AM Feb 24, 2020 | keerthan |

ಕಾಸರಗೋಡು: ತನ್ನ ವೇಗದ ಓಟದಿಂದ ವಿಶ್ವಪ್ರಸಿದ್ದಿ ಪಡೆದ ಕಂಬಳದ ಬಂಗಾರದ ಮನುಷ್ಯ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡರು ರವಿವಾರ ಅಂತ್ಯವಾದ ಬೋಳಂಗಳ ಪೈವಳಿಕೆ ‘ಅಣ್ಣ-ತಮ್ಮ” ಜೋಡುಕರೆ ಕಂಬಳದಲ್ಲಿ ನಾಲ್ಕು ಪದಕಗಳಿಗೆ ಕೊರೊಳೊಡ್ಡಿದ್ದಾರೆ.

Advertisement

ನಾಲ್ಕು ವಿಭಾಗದಲ್ಲಿ ತಾನು ಓಡಿಸಿದ ನಾಲ್ಕು ಜೊತೆ ಕೋಣಗಳನ್ನು ಫೈನಲ್ ಗೆ ತಲುಪಿಸಿದ ಶ್ರೀನಿವಾಸ ಗೌಡರು ಎರಡು ಪ್ರಥಮ ಮತ್ತು ಎರಡು ದ್ವಿತೀಯ ಪ್ರಶಸ್ತಿ ಗೆದ್ದರು. ಹಗ್ಗ ಕಿರಿಯ ಮತ್ತು ನೆಗಿಲು ಕಿರಿಯ ವಿಭಾಗದಲ್ಲಿ ಚಿನ್ನದ ಪದಕ ಪಡೆದರೆ, ಹಗ್ಗ ಹಿರಿಯ ಮತ್ತು ನೇಗಿಲು ಹಿರಿಯ ವಿಭಾಗದಲ್ಲಿ ದ್ವಿತೀಯ ಪ್ರಶಸ್ತಿ ಪಡೆದರು. ಇದರೊಂದಿಗೆ ಈ ಋತುವಿನ ಕಂಬಳಗಳಲ್ಲಿ 39 ಪದಕ ಪಡೆದು ದಾಖಲೆ ಬರೆದರು.

ನೇಗಿಲು ಹಿರಿಯ ವಿಭಾಗದಲ್ಲಿ ಸ್ಪರ್ಧೆ ಮಾಡಿದ್ದ ಬೋಳದ ಗುತ್ತು ಸತೀಶ್ ಶೆಟ್ಟಿಯವರ “ಕಾಲೆ ಮತ್ತು ಧೋನಿ’’ ಎಂಬ ಹೆಸರಿನ ಕೋಣಗಳು ಫೈನಲ್ ಕದನದಲ್ಲಿ 12.45 ಸೆಕಂಡ್ ನಲ್ಲಿ ಓಡಿ ದಾಖಲೆ ಬರೆದವು. ಇವುಗಳನ್ನು ಓಡಿಸಿದ ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಶೆಟ್ಟಿಯವರು ಈ ಸಾಲಿನ ಅತೀ ವೇಗದ ಓಟಗಾರನೆಂಬ ದಾಖಲೆ ಬರೆದರು. (100 ಮೀ. 9.47ಸೆ)

ಪೈವಳಿಕೆ ಕಂಬಳದಲ್ಲಿ ಒಟ್ಟು 95 ಜೊತೆ ಕೋಣಗಳು ಭಾಗವಹಿಸಿದ್ದು, ಅಂತಿಮ ಫಲಿತಾಂಶ ಪಟ್ಟಿ ಇಲ್ಲಿದೆ.

Advertisement

ಕನೆಹಲಗೆ:

ಬೇಲಾಡಿ ಬಾವ ಅಶೋಕ್ ಶೆಟ್ಟಿ (6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)
ಹಲಗೆ ಮುಟ್ಟಿದವರು: ನಾರಾವಿ ಯುವರಾಜ ಜೈನ್

ಬೊಳ್ಳಂಬಳ್ಳಿ ಚೈತ್ರ ಪರಮೇಶ್ವರ ಭಟ್ (6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)
ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ

ಅಡ್ಡ ಹಲಗೆ:
ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ “ಎ”
ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ

ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ “ಬಿ”
ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ

ಹಗ್ಗ ಹಿರಿಯ:
ಪ್ರಥಮ: ಕೂಳೂರು ಪೊಯ್ಯೆಲು ಪಿ.ಆರ್.ಶೆಟ್ಟಿ “ಎ”
ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್

ದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್ “ಎ
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ಹಗ್ಗ ಕಿರಿಯ:
ಪ್ರಥಮ: ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ”ಎ”
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ದ್ವಿತೀಯ: ಸೂಡ ಹಳೆಮನೆ ಅಜಿತ್ ರಾಜ್ ಶೆಟ್ಟಿ
ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್

ನೇಗಿಲು ಹಿರಿಯ:
ಪ್ರಥಮ: ಬೋಳದಗುತ್ತು ಸತೀಶ್ ಶೆಟ್ಟಿ “ಎ”
ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಶೆಟ್ಟಿ

ದ್ವಿತೀಯ: ಇರುವೈಲು ಪಾನಿಲ ಬಾಡ ಪೂಜಾರಿ ‘ಎ’
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ನೇಗಿಲು ಕಿರಿಯ:
ಪ್ರಥಮ: ಪೆರುವಾಯಿ ಕುಂಬಳೆಕೋಡಿ ರಂಜಿತ್ ಮಾರ್ಲ
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ದ್ವಿತೀಯ: ಉಡುಪಿ ಹಿರೇಬೆಟ್ಟು ಶಂಕರ ದೇವಾಡಿಗ
ಓಡಿಸಿದವರು: ಹಿರೇಬೆಟ್ಟು ಆಕಾಶ್

Advertisement

Udayavani is now on Telegram. Click here to join our channel and stay updated with the latest news.

Next