Advertisement

ಬೆಳಗಾವಿ: ಮಹಾರಾಷ್ಟ್ರ ಮಾಜಿ ಸಿಎಂ ಮುಂದೆಯೇ ನಾಡದ್ರೋಹ ಘೋಷಣೆ ಕೂಗಿದ ಎಂಇಎಸ್ ಕಾರ್ಯಕರ್ತರು

12:43 PM May 11, 2022 | Team Udayavani |

ಬೆಳಗಾವಿ : ಬೆಳಗಾವಿಯಲ್ಲಿ ಎಂಇಎಸ್ ಪುಂಡರು ನಾಡದ್ರೋಹ ಘೋಷಣೆ ಕೂಗಿ ಮತ್ತೆ ತಮ್ಮ ಹುಚ್ಚಾಟವನ್ನು ಶುರುಮಾಡಿದ್ದಾರೆ.

Advertisement

ಮರಾಠಾ ಕೋ ಆಪರೇಟಿವ್ ಬ್ಯಾಂಕ್ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶರದ್ ಪವಾರ್ ಆಗಮಿಸಿದ್ದರು. ಈ ವೇಳೆ  ಮಹಾರಾಷ್ಟ್ರ ಮಾಜಿ ಸಿಎಂ ಶರದ್ ಪವಾರ್ ಭಾಷಣ ಶುರುವಾಗುತ್ತಿದ್ದಂತೆ  ಕೆಲ ಎಂಇಎಸ್ ಕಾರ್ಯಕರ್ತರು ನಾಡದ್ರೋಹ ಘೋಷಣೆ ಕೂಗಿದ ಘಟನೆ ನಡೆಯಿತು.

ಇದನ್ನೂ ಓದಿ: Watch; ಆಂಧ್ರಪ್ರದೇಶ-ಅಸಾನಿ ಚಂಡಮಾರುತದ ಅಬ್ಬರಕ್ಕೆ ತೇಲಿಬಂದ ಚಿನ್ನದ ಬಣ್ಣದ ರಥ

ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಸೇರಬೇಕು ಎಂದು ಘೋಷಣೆ  ಕೂಗುವ ವೇಳೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಏನು ಮಾತಾನಾಡದೆ ಸುಮ್ಮನೆ ನಿಂತಿದ್ದರು. ಬಳಿಕ  ಭಾಷಣ ಪ್ರಾರಂಭ ಮಾಡಬಹುದಾ? ಎಂದು ಎಂಇಎಸ್ ಕಾರ್ಯಕರ್ತರ ಅನುಮತಿ ಕೇಳಿ ಶರದ್ ಪವಾರ್  ಭಾಷಣ ಶುರು ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next