Advertisement

ಎಂಇಎಸ್ ಹಿರಿಯ ಹೋರಾಟಗಾರ ಎನ್.ಡಿ.‌ ಪಾಟೀಲ್ ನಿಧನ

01:15 PM Jan 17, 2022 | Team Udayavani |

ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿಯ ಹಿರಿಯ ಹೋರಾಟಗಾರ ಮಹಾರಾಷ್ಟ್ರದ ಮಾಜಿ ಸಚಿವ ನಾರಾಯಣ ಜ್ಞಾನದೇವ್ ಪಾಟೀಲ್ (ಎನ್.ಡಿ.‌ಪಾಟೀಲ) ಅನಾರೋಗ್ಯದಿಂದ ಸೋಮವಾರ ಬೆಳಗ್ಗೆ ನಿಧನರಾದರು.

Advertisement

ಅನಾರೋಗ್ಯದಿಂದಾಗಿ ಎನ್.ಡಿ. ಪಾಟೀಲ (93 ವ) ಅವರನ್ನು ಕೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ನಾಲ್ಕೈದು ದಿನಗಳಿಂದ ಚಿಕಿತ್ಸೆ ನೀಡಿದರೂ ಫಲಿಸದೇ ನಿಧನರಾದರು. ಮಹಾರಾಷ್ಟ್ರ ಏಕೀಕರಣ ಸಮಿತಿ ಪ್ರತಿವರ್ಷ ಜ. 17ರಂದು ನಡೆಸುವ ಹುತಾತ್ಮ ದಿನದಂದೇ ಎನ್.ಡಿ. ಪಾಟೀಲ ನಿಧನರಾಗಿದ್ದು ಕಾಕತಾಳೀಯ.

ಇದನ್ನೂ ಓದಿ:ಪಿಡಬ್ಲ್ಯೂಡಿ ಖಾಸಗಿ ಕಂಪನಿಯಾ?: ಅಧಿಕಾರಿಗಳಿಗೆ ಸಂಸದ ಉಮೇಶ ಜಾಧವ್ ತರಾಟೆ

ಎನ್.ಡಿ ಪಾಟೀಲ್ ಎಂದೇ ಖ್ಯಾತರಾಗಿದ್ದ ಅವರು ಬೆಳಗಾವಿ ಗಡಿ ವಿವಾದದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಹಾರಾಷ್ಟ್ರದಿಂದ ಬೆಳಗಾವಿಗೆ ಬಂದು ಚಳವಳಿ ನಡೆಸುತ್ತಿದ್ದರು.‌ಸುಮಾರು 60 ವರ್ಷಗಳಿಂದ ಕರ್ನಾಟಕ ಮಹಾರಾಷ್ಟ್ರ ಗಡಿ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದರು. 18 ವರ್ಷಗಳ ಕಾಲ ಮಹಾರಾಷ್ಟ್ರ ವಿಧಾನ ಪರಿಷತ್ ಸದಸ್ಯರಾಗಿದ್ದರು. 1977-80ರಲ್ಲಿ ಮಹಾರಾಷ್ಟ್ರದ ಸಹಕಾರ ಸಚಿವರಾಗಿದ್ದರು. ರಾಜ್ಯ ಗಡಿ ಸಲಹಾ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next