Advertisement

ಕೋವಿಡ್ ದಿಂದಾಗಿ ಶೇ.57 ವಯೋವೃದ್ಧರಿಗೆ ಮಾನಸಿಕ ಖಿನ್ನತೆ

10:09 PM Jul 09, 2022 | Team Udayavani |

ನವದೆಹಲಿ: ದೇಶದಲ್ಲಿ ಲಕ್ಷಾಂತರ ಮಂದಿಯನ್ನು ಬಲಿ ತೆಗೆದುಕೊಂಡ ಕೊರೊನಾ ಸಮಯದಲ್ಲಿ ಶೇ.57 ಹಿರಿಯ ನಾಗರಿಕರು ಮಾನಸಿಕ ಸಮಸ್ಯೆಗಳನ್ನು ಎದುರಿಸಿದ್ದಾರೆ.

Advertisement

ಅಂತರಾ ಸಂಸ್ಥೆ ನಡೆಸಿರುವ “ಸ್ಟೇಟ್‌ ಆಫ್ ಸೀನಿಯರ್ಸ್‌ ಸರ್ವೇ’ನಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.

ಈ ಸಮೀಕ್ಷೆಯಲ್ಲಿ 60 ವರ್ಷ ಮೇಲ್ಪಟ್ಟ 2,700 ಜನರ ಅಭಿಪ್ರಾಯಗಳನ್ನು ಕಲೆ ಹಾಕಲಾಗಿದೆ. ಅದರಲ್ಲಿ ಶೇ.57 ಮಂದಿ ತಾವು ಕೊರೊನಾದಿಂದಾಗಿ ಮಾನಸಿಕ ಸಮಸ್ಯೆಗೆ ಒಳಗಾಗಿದ್ದಾಗಿ ತಿಳಿಸಿದ್ದಾರೆ. ಹಾಗೂ ಶೇ.53 ಮಂದಿ ಸರ್ಕಾರವು ಪರಿಣಾಮಕಾರಿಯಾಗಿ ಕೊರೊನಾ ಸೋಂಕನ್ನು ನಿಯಂತ್ರಿಸಿದೆ ಎಂದಿದ್ದಾರೆ.

ಮುಂಬೈನಲ್ಲಿ ಶೇ.81 ಹಿರಿಯ ನಾಗರಿಕರು ಮಾನಸಿಕ ಸಮಸ್ಯೆ ಅನುಭವಿಸಿದ್ದಾಗಿ ಹೇಳಿದ್ದರೆ, ಬೆಂಗಳೂರು ಮತ್ತು ಪುಣೆಯ ಶೇ.70 ಹಿರಿಯ ನಾಗರಿಕರು ಮಾನಸಿಕ ಸಮಸ್ಯೆಯಾಗಿದ್ದಾಗಿ ಹೇಳಿದ್ದಾರೆ. ಹೈದರಾಬಾದ್‌ನಲ್ಲಿ ಶೇ. 94 ಹಿರಿಯ ನಾಗರಿಕರು ತಮಗೆ ಮಾನಸಿಕ ಸಮಸ್ಯೆ ಕಾಣಿಸಲಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next