Advertisement

ಋತು ಚಕ್ರದ ಬಗ್ಗೆ ಹೆಣ್ಣು ಮಕ್ಕಳಿಗೆ ಅರಿವು ಮೂಡಿಸಿ

01:09 PM May 29, 2022 | Team Udayavani |

ಚಾಮರಾಜನಗರ: ಋತುಚಕ್ರದ ಬಗ್ಗೆ ತಾಯಂದಿರು ತಮ್ಮ ಹೆಣ್ಣು ಮಕ್ಕಳಿಗೆ ಅರಿವು ಮೂಡಿಸುವುದು ಅಗತ್ಯ ಎಂದು ಜಿಪಂ ಉಪಕಾರ್ಯದರ್ಶಿ ಗುಡೂರ್‌ ಭೀಮಸೇನ್‌ ಸಲಹೆ ನೀಡಿದರು.

Advertisement

ತಾಲೂಕಿನ ಹರವೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ ಮಹಿಳೆಯರಿಗೆ ಋತುಚಕ್ರ ನಿರ್ವಹಣೆ ಕುರಿತ ಜಿಲ್ಲಾ ಮಟ್ಟದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ಬಂದಾಗಋತುಚಕ್ರ ಎಂಬುದು ಪ್ರತಿಯೊಬ್ಬ ಹೆಣ್ಣುಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲಿಭೌತಿಕ ಬದಲಾವಣೆಗಳಾಗುತ್ತವೆ. ಋತುಚಕ್ರದಬಗ್ಗೆ ಮೌಡ್ಯ ಮನೆ ಮಾಡಿಕೊಂಡಿದೆ. ಋತುಚಕ್ರ ಯಾಕೆ ಬರುತ್ತದೆ. ಬಂದಾಗ ಏನೆಲ್ಲ ಬದಲಾವಣೆಗಳಾಗುತ್ತವೆ. ಇದನ್ನು ಹೇಗೆನಿರ್ವಹಣೆ ಮಾಡಬೇಕು ಎಂಬುದರ ಕುರಿತುತಾಯಂದಿರು ಮುಕ್ತವಾಗಿ ತಮ್ಮ ಹೆಣ್ಣು ಮಕ್ಕಳಿಗೆಹೇಳಿಕೊಡಬೇಕು. ಶಾಲೆಗಳಲ್ಲೂ ಸಹ ಶಿಕ್ಷಕಿಯರು ಇದನ್ನು ಹೇಳಿಕೊಡಬೇಕು ಎಂದರು.

ಋತುಚಕ್ರ ದೈಹಿಕ ಬೆಳವಣಿಗೆಯಾಗುತ್ತದೆ. ನಾವು ಸೇವಿಸುವ ಆಹಾರದಲ್ಲಿಬದಲಾವಣೆಗಳಾದಾಗ ಋತುಚಕ್ರದಲ್ಲಿಯೂ ಬದಲಾವಣೆಯಾಗುತ್ತದೆ.  ಕೆಲವು ಬಾರಿ ಕೆಲ ಮಕ್ಕಳಿಗೆ ಅಧಿಕ ರಕ್ತಸ್ರಾವವಾಗಬಹುದು. ಋತುಚಕ್ರದ ಬಗ್ಗೆ ಮಕ್ಕಳಿಗೆ ಮುಕ್ತವಾಗಿಹೇಳಿಕೊಡದಿದ್ದರೆ ಬಹಳಷ್ಟು ಮಕ್ಕಳು ಖನ್ನತೆಗೆಒಳಗಾಗುತ್ತಾರೆ. ಎಷ್ಟೋ ಮುಗ್ಧಮಕ್ಕಳು ಬೇರೆ ಬೇರೆ ರೀತಿಯಲ್ಲಿ ಶೋಷಣೆಗೆ ಒಳಪಡುತ್ತಾರೆ. ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಕೊಡದಿದ್ದರೆ ಅವರು ತಪ್ಪು ದಾರಿ ಹಿಡಿಯುವ ಸಾಧ್ಯತೆಯೂ ಇರುತ್ತದೆ ಎಂದು ತಿಳಿಸಿದರು.

ಜಿಲ್ಲಾ ಕಾರ್ಯಕ್ರಮ ಅಧಿಕಾರಿಡಾ.ರವಿಕುಮಾರ್‌ ಮಾತನಾಡಿ, ಋತುಚಕ್ರವುಹೆಣ್ಣು ಮಕ್ಕಳು ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ಬರುವಾಗ ಆಗುವ ಸಹಜ ದೈಹಿಕಬದಲಾವಣೆಯಾಗಿದೆ. ಹಿಂದಿನ ಕಾಲದಿಂದಲೂ ಕೆಲವು ಆಚರಣೆಗಳನ್ನು ತಪ್ಪು ರೀತಿಯಲ್ಲಿಮಾಡುತ್ತಾ ಬಂದಿದ್ದೇವೆ. ಹಿಂದೆ ಋತುಚಕ್ರದಸಂದರ್ಭದಲ್ಲಿ ಮಹಿಳೆಯರನ್ನು ಮನೆಯಿಂದ ಹೊರಗೆ ಇಡುವ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ, ಈಗ ಕಾಲ ಬದಲಾಗಿದ್ದು ಪ್ರಸ್ತುತ ಎಲ್ಲರಿಗೂ ಋತುಚಕ್ರದ ಬಗ್ಗೆ ಅರಿವು ಬಂದಿದೆ ಎಂದು ಹೇಳಿದರು.

Advertisement

ಇದಕ್ಕೂ ಮುನ್ನ ಋತುಚಕ್ರ ಸ್ವಚ್ಛತೆ ಬಗ್ಗೆ ಅರಿವು ಜಾಥಾ ನಡೆಯಿತು. ಜಾಥಾವು ಗ್ರಾಮದಪ್ರಮುಖ ಬೀದಿಗಳಲ್ಲಿ ಹೊರಟು ಜನರಲ್ಲಿ ಅರಿವು ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯಕೇಂದ್ರದ ಆರೋಗ್ಯಾಧಿಕಾರಿ ಡಾ.ಸುರೇಶ್‌,ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಡಾ.ಮಮತಾ ಕುಮಾರಿ, ಸಮುದಾಯಅಧಿಕಾರಿ ಶ್ರುತಿ, ಯುನಿಸೆಫ್ ಎಸ್‌ಬಿಐ ಸಿಸಿಜಿಲ್ಲಾ ಸಂಯೋಜಕ ಟಿ.ಜೆ.ಸುರೇಶ್‌, ಗ್ರಾಪಂಕಾರ್ಯದರ್ಶಿ ಮಹದೇವಯ್ಯ,ಉಪಪ್ರಾಂಶುಪಾಲ ಶಿವರಾಮಯ್ಯ, ದಾಖಲಾತಿ ಅಧಿಕಾರಿ ಲತಾ, ಡಿಎಚ್‌ಇಡಿ ದೊರೆಸ್ವಾಮಿ, ಸಿಡಿಪಿಒ ಮುತ್ತು, ಸ್ವಚ್ಛ ಭಾರತ್‌ ಮಿಷನ್‌ನಜಿಲ್ಲಾ ಸಮಾಲೋಚಕರಾದ ಮಹದೇವ್‌, ಜೋಸೆಫ್, ಪ್ರಭುಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next