Advertisement

ಪುರುಷರ ಸರ ಕಳವು!

11:54 AM May 14, 2018 | |

ಬೆಂಗಳೂರು: ಇದುವರೆಗೂ ಮಹಿಳೆಯರ ಸರ ಕಸಿಯುತ್ತಿದ್ದ ಸರಗಳ್ಳರು ಇದೀಗ ಕೊರಳಲ್ಲಿ ದಪ್ಪ ಗಾತ್ರದ ಚಿನ್ನದ ಸರ ಹಾಕುವ ಪುರುಷರನ್ನೂ ಟಾರ್ಗೆಟ್‌ ಮಾಡಿಕೊಂಡಿದ್ದಾರೆ. ಅಂತಹದೊಂದು ಘಟನೆ ಮಡಿವಾಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Advertisement

ಈಜೀಪುರ ನಿವಾಸಿ ವಿಜಯ್‌ರಾಜ್‌ ಸರ ಕಳೆದು ಕೊಂಡವರು. ಪ್ರವಾಸಕ್ಕೆ ಹೋಗಿದ್ದ ವಿಜಯ್‌ರಾಜ್‌ ಮೇ 11ರಂದು ಬೆಳಗ್ಗೆ ಬಸ್‌ ನಿಲ್ದಾಣದಿಂದ ಮನೆಗೆ ನಡೆದು ಹೋಗುವಾಗ ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು 70 ಗ್ರಾಂ ತೂಕದ ಎರಡು ಸರಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.

ಖಾಸಗಿ ಕಂಪನಿ ಉದ್ಯೋಗಿ ವಿಜಯ್‌ರಾಜ್‌ ಮೇ 8ರಂದು ಸ್ನೇಹಿತರ ಜತೆ ಹೊರನಾಡು, ಕೊಲ್ಲೂರು, ಸಿಂಗದೂರು ದೇವಾಲಯಗಳಿಗೆ ಪ್ರವಾಸ ಹೋಗಿದ್ದು, ಮೇ 11ರ ಬೆಳಗಿನಜಾವ 4.15ರ ಸುಮಾರಿಗೆ ನಗರಕ್ಕೆ ವಾಪಸಾಗಿದ್ದಾರೆ.

ಸಿಲ್ಕ್ ಬೋರ್ಡ್‌ ಜಂಕ್ಷನ್‌ನಲ್ಲಿ ಬಸ್‌ ಇಳಿದು ಈಜೀಪುರಕ್ಕೆ ನಡೆದು ಹೋಗುವಾಗ ಕಪ್ಪು ಬಣ್ಣದ ಪಲ್ಸರ್‌ ಬೈಕ್‌ನಲ್ಲಿ ಬಂದ ಇಬ್ಬರು ಆರೋಪಿಗಳು ಡಾಲರ್ಸ್‌ ಕಾಲೋನಿ ಬಳಿ ಏಕಾಏಕಿ ವಿಜಯ್‌ರಾಜ್‌ನನ್ನು ಅಡ್ಡಗಟ್ಟಿ ಬ್ಯಾಗ್‌ನಲ್ಲಿ ಏನು ಕೊಂಡೊಯ್ಯುತ್ತಿದ್ದಿಯಾ ಎಂದು ಪ್ರಶ್ನಿಸಿದ್ದಾರೆ.

ಇವರ ವರ್ತನೆಯಿಂದ ಆಕ್ರೋಶಗೊಂಡ ವಿಜಯ್‌ರಾಜ್‌, ನನ್ನನ್ನು ಪ್ರಶ್ನಿಸಲು ನೀವ್ಯಾರು? ಪೊಲೀಸರು ಕೇಳಬೇಕು ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಗಳ ಪೈಕಿ ಒಬ್ಟಾತ ಮುಖಕ್ಕೆ ಪೆಪ್ಪರ್‌ ಸ್ಪ್ರೆà ಹೊಡೆಯಲು ಯತ್ನಿಸಿದ್ದು, ಇದಕ್ಕೆ ವಿಜಯ್‌ ಪ್ರತಿರೋಧ ವ್ಯಕ್ತಪಡಿಸಿದರು.

Advertisement

ಅದೇ ವೇಳೆ ಜತೆಗಿದ್ದ ಇನ್ನೊಬ್ಬ, ವಿಜಯ್‌ ಕುತ್ತಿಗೆಗೆ ಕೈ ಹಾಕಿ ಸರಗಳನ್ನು ಕಿತ್ತುಕೊಂಡಿದ್ದಾನೆ. ಬಳಿಕ ಇಬ್ಬರೂ ಸೇರಿ ವಿಜಯ್‌ ಮೇಲೆ ಹಲ್ಲೆ ನಡೆಸಿ 70 ಗ್ರಾಂ ತೂಕದ 2 ಸರಗಳನ್ನು ಕಸಿದುಕೊಂಡಿದ್ದಾರೆ. ಈ ವೇಳೆ ಆರೋಪಿಗಳ ಚಿತ್ರವನ್ನು ವಿಜಯ್‌ ಮೊಬೈಲ್‌ನಲ್ಲಿ ಸೆರೆಹಿಡಿಯಲು ಮುಂದಾದಾಗ ದುಷ್ಕರ್ಮಿಗಳು ಮೊಬೈಲ್‌ ಕಿತ್ತುಕೊಂಡು ಒಡೆದು ಹಾಕಿದ್ದಾರೆ. 

ಈ ಕುರಿತು ವಿಜಯ್‌ ಮಡಿವಾಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೆಲ ದಿನಗಳ ಹಿಂದೆ ಆಡುಗೋಡಿ ಠಾಣಾ ವ್ಯಾಪ್ತಿಯ ಲಕ್ಕಸಂದ್ರದ ಬಳಿ ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ಪ್ರಭು ಎಂಬುವವರ 21 ಗ್ರಾಂನ ಸರ ಕಳವು ಮಾಡಿ ಪಾರಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next