Advertisement

Karnataka; ಬಗರ್‌ಹುಕುಂ ಸಮಿತಿಯಲ್ಲಿ ಸ್ಥಳೀಯರಿಗೆ ಸದಸ್ಯತ್ವ

11:12 PM Feb 23, 2024 | Team Udayavani |

ಬೆಂಗಳೂರು: ಬಗರ್‌ಹಕುಂ ಸಮಿತಿಯಲ್ಲಿ ಶಾಸಕರು ಕಾರ್ಯನಿರ್ವಹಿಸಲು ಇಚ್ಛಿಸದಿದ್ದಲ್ಲಿ ಅಥವಾ ಹಲವು ಜವಾಬ್ದಾರಿಗಳಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗದಿದ್ದಲ್ಲಿ ಸ್ಥಳೀಯರಿಗೆ ಸಮಿತಿ ಸದಸ್ಯತ್ವ ನೀಡಲು ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಮಸೂದೆ-2024ಕ್ಕೆ ವಿಧಾನಸಭೆಯಲ್ಲಿ ಶುಕ್ರವಾರ ಅನುಮೋದನೆ ದೊರೆತಿದೆ.

Advertisement

ಮಸೂದೆ ಮಂಡಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡರು, ಬಗರ್‌ಹುಕುಂ ಸಮಿತಿಯಲ್ಲಿ ಸಾಮಾನ್ಯ ವಾಗಿ ಶಾಸಕರು ಇರುತ್ತಾರೆ. ಆದರೆ ಶಾಸಕರು ಡಿಸಿಎಂ, ಸಚಿವ ಸ್ಥಾನ, ವಿಪಕ್ಷ ನಾಯಕ, ಸಚೇತಕ ಸಹಿತ ವಿವಿಧ ಹುದ್ದೆಗಳನ್ನು ನಿರ್ವಹಿಸುವುದರಿಂದ ಕೆಲವರಿಗೆ ಸಮಿತಿಯ ಕಾರ್ಯ ಭಾರ ಹೆಚ್ಚುತ್ತಿದೆ. ಹೀಗಾಗಿ ಶಾಸಕರಿಗೆ ವಿನಾಯಿತಿ ನೀಡುವಂತೆ ಕೋರಿಕೆಗಳು ಬಂದಿವೆ ಎಂದರು.

ಒಂದು ವೇಳೆ ಯಾವುದಾದರೂ ಶಾಸಕರು ತಮಗೆ ಹೊಣೆಗಾರಿಕೆಯನ್ನು ನಿಭಾಯಿಸುವ ಇಚ್ಛೆ ಅಥವಾ ಸಮಯ ಇಲ್ಲವೆಂದು ಲಿಖಿತ ರೂಪದಲ್ಲಿ ಮನವಿ ಮಾಡಿ ದರೆ, ಅವರಿಗೆ ವಿನಾಯಿತಿ ನೀಡಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next